ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರು ಸಾವು, 47 ಮಂದಿಗೆ ದೃಢ

ಕೋವಿಡ್‌: 20 ಮಂದಿ ಗುಣಮುಖ
Last Updated 5 ಆಗಸ್ಟ್ 2020, 13:14 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಬುಧವಾರ ಒಬ್ಬರು ಸಾವಿಗೀಡಾಗಿದ್ದಾರೆ. 47 ಮಂದಿಗೆ ಸೋಂಕು ದೃಢಪಟ್ಟಿದೆ, 20 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನಗರದ ಬಸನವಹಳ್ಳಿಯ ಅರವಿಂದ ನಗರದ 68 ವರ್ಷದ ಪುರುಷ (ಪಿ–121751) ಮೃತಪಟ್ಟವರು. ಅವರಿಗೆ ಮಧುಮೇಹವೂ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 25, ತರೀಕೆರೆ– 13, ಮೂಡಿಗೆರೆ– 4, ಕಡೂರು ಮತ್ತು ಅಜ್ಜಂಪುರ ತಲಾ ಎರಡು ಹಾಗೂ ಶೃಂಗೇರಿ– ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 671ಸಕ್ರಿಯ ಪ್ರಕರಣಗಳು ಇವೆ. ಈವರೆಗೆ 527 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ ಸಾವಿನ ಸಂಖ್ಯೆ 27ಕ್ಕೆ (ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಎರಡು ಪ್ರಕರಣ ಸಹಿತ) ಏರಿದೆ. ಜಿಲ್ಲೆಯ ಒಟ್ಟು ಕೋವಿಡ್‌ ಪ್ರಕರಣ ಸಂಖ್ಯೆ 1243ಕ್ಕೆ ತಲುಪಿದೆ. ಜಿಲ್ಲೆಯ ವಿವಿಧೆಡೆ 348 ನಿಯಂತ್ರಿತ ವಲಯಗಳು (ಕಂಟೈನ್‌ಮೆಂಟ್‌ ಝೋನ್‌) ಇವೆ.


ಪಟ್ಟಿ

ಜಿಲ್ಲೆಯಲ್ಲಿ ಒಟ್ಟು: 1243

ದಿನದ ಏರಿಕೆ: 47

ಸಕ್ರಿಯ ಪ್ರಕರಣ: 671

ದಿನದ ಏರಿಕೆ: 26

ಗುಣಮುಖ: 527

ದಿನದ ಏರಿಕೆ: 20

ಸಾವು: 27(ಶಿವಮೊಗ್ಗಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟಜಿಲ್ಲೆ 2 ಪ್ರಕರಣ ಸಹಿತ)

ದಿನದ ಏರಿಕೆ: 01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT