<p><strong>ಚಿಕ್ಕಮಗಳೂರು:</strong> ಕರ್ನಾಟಕ ಪ್ರದೇಶ ಕುರುಬರ ಸಂಘದ ಆಡಳಿತ ಮಂಡಳಿಯ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ನಾಲ್ಕು ನಿರ್ದೇಶಕ ಸ್ಥಾನಗಳ ಪೈಕಿ ಒಂದು ಮಹಿಳೆಗೆ ಮೀಸಲಾಗಿದೆ.</p>.<p>ಜಿಲ್ಲಾ ಪಂಚಾಯಿತಿ ಬಳಿಯ ಕನಕ ಸಮುದಾಯ ಭವನ ಆವರಣದ ಶಾಲಾ ಕಟ್ಟಡದಲ್ಲಿ ಮತದಾನ ನಡೆಯಿತು. ನಾಲ್ಕು ಮತಗಟ್ಟೆಗಳು ಇದ್ದವು. ಒಟ್ಟು 3,365 ಮತದಾರರು ಇದ್ದಾರೆ.</p>.<p>ಬೆಳಿಗ್ಗೆ 9ರಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಿತು. ಸಮುದಾಯದ ಮುಖಂಡರು, ಸ್ಪರ್ಧಿಗಳು ಉತ್ಸಾಹದಿಂದ ಮತದಾನ ಮಾಡಿದರು.</p>.<p>ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಒಬ್ಬ ಮತದಾರ ಸಾಮಾನ್ಯ ಕ್ಷೇತ್ರದಲ್ಲಿ ಮೂವರಿಗೆ, ಮಹಿಳಾ ಕ್ಷೇತ್ರದಲ್ಲಿ ಒಬ್ಬರಿಗೆ ಮತ ಹಾಕಬೇಕು.</p>.<p>ಮಹಿಳಾ ನಿರ್ದೇಶ ಸ್ಥಾನಕ್ಕೆ ಜಿ.ಎಸ್.ರೇಖಾ ಹುಲಿಯಪ್ಪಗೌಡ ಮತ್ತು ಸವಿತಾ ಸತ್ಯನಾರಾಯಣ ಈ ಇಬ್ಬರು ಕಣದಲ್ಲಿದ್ದಾರೆ. ಮೂರು ಸಾಮಾನ್ಯ ಸ್ಥಾನಗಳಿಗೆ ಟಿ.ಸಿ.ದರ್ಶನ್, ಡಿ.ಸಿ.ಪುಟ್ಟೇಗೌಡ, ಎಂ.ಎಸ್.ಬಸವರಾಜಪ್ಪ, ಬಿ.ಎಂ.ಮುರುಗೇಶಪ್ಪ, ಕೆ.ಎಸ್.ಲೋಕೇಶಪ್ಪ, ಕೆ.ಟಿ.ಶ್ರೀನಿವಾಸ್, ಕೆ.ಜೆ.ಸಚ್ಚಿನ್, ಟಿ.ಎಚ್.ಹಾಲವಜ್ರಪ್ಪ ಒಟ್ಟು ಎಂಟು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.</p>.<p>ಸಂಜೆ 5.30ರ ನಂತರ ಮತ ಎಣಿಕೆ ಪ್ರಕ್ರಿಯೆ ಶುರುವಾಗಿತ್ತು. ಮಹಿಳಾ ಸ್ಥಾನದಲ್ಲಿ ರೇಖಾ ಹುಲಿಯಪ್ಪ ಗೌಡ ಮುನ್ನಡೆ ಸಾಧಿಸಿದ್ದರು. ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಗುರುಮೂರ್ತಿ ಅವರು ಚುನಾವಣಾ ಅಧಿಕಾರಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಕರ್ನಾಟಕ ಪ್ರದೇಶ ಕುರುಬರ ಸಂಘದ ಆಡಳಿತ ಮಂಡಳಿಯ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ನಾಲ್ಕು ನಿರ್ದೇಶಕ ಸ್ಥಾನಗಳ ಪೈಕಿ ಒಂದು ಮಹಿಳೆಗೆ ಮೀಸಲಾಗಿದೆ.</p>.<p>ಜಿಲ್ಲಾ ಪಂಚಾಯಿತಿ ಬಳಿಯ ಕನಕ ಸಮುದಾಯ ಭವನ ಆವರಣದ ಶಾಲಾ ಕಟ್ಟಡದಲ್ಲಿ ಮತದಾನ ನಡೆಯಿತು. ನಾಲ್ಕು ಮತಗಟ್ಟೆಗಳು ಇದ್ದವು. ಒಟ್ಟು 3,365 ಮತದಾರರು ಇದ್ದಾರೆ.</p>.<p>ಬೆಳಿಗ್ಗೆ 9ರಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಿತು. ಸಮುದಾಯದ ಮುಖಂಡರು, ಸ್ಪರ್ಧಿಗಳು ಉತ್ಸಾಹದಿಂದ ಮತದಾನ ಮಾಡಿದರು.</p>.<p>ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಒಬ್ಬ ಮತದಾರ ಸಾಮಾನ್ಯ ಕ್ಷೇತ್ರದಲ್ಲಿ ಮೂವರಿಗೆ, ಮಹಿಳಾ ಕ್ಷೇತ್ರದಲ್ಲಿ ಒಬ್ಬರಿಗೆ ಮತ ಹಾಕಬೇಕು.</p>.<p>ಮಹಿಳಾ ನಿರ್ದೇಶ ಸ್ಥಾನಕ್ಕೆ ಜಿ.ಎಸ್.ರೇಖಾ ಹುಲಿಯಪ್ಪಗೌಡ ಮತ್ತು ಸವಿತಾ ಸತ್ಯನಾರಾಯಣ ಈ ಇಬ್ಬರು ಕಣದಲ್ಲಿದ್ದಾರೆ. ಮೂರು ಸಾಮಾನ್ಯ ಸ್ಥಾನಗಳಿಗೆ ಟಿ.ಸಿ.ದರ್ಶನ್, ಡಿ.ಸಿ.ಪುಟ್ಟೇಗೌಡ, ಎಂ.ಎಸ್.ಬಸವರಾಜಪ್ಪ, ಬಿ.ಎಂ.ಮುರುಗೇಶಪ್ಪ, ಕೆ.ಎಸ್.ಲೋಕೇಶಪ್ಪ, ಕೆ.ಟಿ.ಶ್ರೀನಿವಾಸ್, ಕೆ.ಜೆ.ಸಚ್ಚಿನ್, ಟಿ.ಎಚ್.ಹಾಲವಜ್ರಪ್ಪ ಒಟ್ಟು ಎಂಟು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.</p>.<p>ಸಂಜೆ 5.30ರ ನಂತರ ಮತ ಎಣಿಕೆ ಪ್ರಕ್ರಿಯೆ ಶುರುವಾಗಿತ್ತು. ಮಹಿಳಾ ಸ್ಥಾನದಲ್ಲಿ ರೇಖಾ ಹುಲಿಯಪ್ಪ ಗೌಡ ಮುನ್ನಡೆ ಸಾಧಿಸಿದ್ದರು. ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಗುರುಮೂರ್ತಿ ಅವರು ಚುನಾವಣಾ ಅಧಿಕಾರಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>