‘ಕಸ್ತೂರಿರಂಗನ್ ವರದಿ ಜಾರಿಯಾದರೆ ಅರಣ್ಯ ಪ್ರದೇಶದೊಂದಿಗೆ ಸಾಂಸ್ಕೃತಿಕ ಅರಣ್ಯವಾದ ಕಾಫಿ, ಇತರೆ ತೋಟಗಳು ಅರಣ್ಯ ಪ್ರದೇಶದಲ್ಲಿ ವಿಲೀನಗೊಂಡು ರೈತರು, ಕೂಲಿ ಕಾರ್ಮಿಕರು ಬೀದಿ ಪಾಲಾಗುತ್ತಾರೆ. ಅರಣ್ಯ ಪ್ರದೇಶವನ್ನು ಮಾತ್ರ ಗುರಿಯಾಗಿಸುವುದನ್ನು ಬಿಟ್ಟು ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಜಮೀನಿನ ತಂಟೆಗೆ ಕಸ್ತೂರಿರಂಗನ್ ವರದಿ ಮುಂದುವರಿಯಬಾರದು’ ಎಂದು ಹೇಳಿದರು.