ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದ ಸಾಲುಮರದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಕಂಡು ಬಂದ ಕಾಡಾನೆ ಗುಂಪು
ಶಾಶ್ವತ ಯೋಜನೆ ರೂಪಿಸಿ
‘ಒಂದು ಕಾಡಾನೆ ದಾಳಿ ನಡೆಸಿದರೇ ಹತ್ತಾರು ಕಾಫಿ ಗಿಡಗಳು ನಾಶವಾಗುತ್ತವೆ. ಆದರೆ ಇಲ್ಲಿ 19 ಕಾಡಾನೆಗಳು ಏಕಕಾಲದಲ್ಲಿ ದಾಳಿ ನಡೆಸಿದರೆ ಕಾಫಿ ತೋಟಗಳು ಉಳಿಯುವುದಿಲ್ಲ. ಕಾಡಾನೆಗಳೊಂದಿಗೆ ನಾಲ್ಕೈದು ಮರಿಗಳು ಇರುವುದರಿಂದ ಹೆಚ್ಚು ದೂರ ಕ್ರಮಿಸದೇ ಸುತ್ತಮುತ್ತಲ ತೋಟಗಳಲ್ಲಿಯೇ ತಿರುಗಾಡುತ್ತಿರುವುದರಿಂದ ಬೆಳೆ ನಾಶವಾಗುತ್ತಿದೆ. ದಾಳಿ ನಡೆಸುತ್ತಿರುವ ಕಾಡಾನೆಗಳನ್ನು ಎಷ್ಟೇ ಅರಣ್ಯಕ್ಕೆ ಓಡಿಸಿದರೂ ಪುನಃ ಗ್ರಾಮದೊಳಕ್ಕೆ ಬರುವುದರಿಂದ ಕಾಡಾನೆಗಳ ಹಿಡಿದು ಸ್ಥಳಾಂತರಿಸುವುದೊಂದೇ ಪರಿಹಾರವಾಗಿದೆ. ಜನಪ್ರತಿನಿಧಿಗಳು ಅರಣ್ಯ ಅಧಿಕಾರಿಗಳು ಕಾಡಾನೆ ಹಾವಳಿ ತಡೆಯಲು ಶಾಶ್ವತ ಯೋಜನೆ ರೂಪಿಸಿ ಜಾರಿಗೊಳಿಸಬೇಕು’ ಎನ್ನುತ್ತಾರೆ ಗ್ರಾಮದ ಸುಂದ್ರೇಶ್.