ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಮ್ನಿ ವ್ಯಾನಿಗೆ ಕಾಡಾನೆ ತಿವಿದು ಅಪಘಾತ: ನಾಲ್ವರಿಗೆ ಗಾಯ

Last Updated 16 ಆಗಸ್ಟ್ 2021, 7:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ‌ ಕುಂದೂರುಬಳಿ ಸಾಗುತ್ತಿದ್ದ ಒಮ್ನಿ ವ್ಯಾನಿಗೆ ಕಾಡಾನೆ ತಿವಿದು ನಾಲ್ವರುಗಾಯಗೊಂಡಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಜೋಳದಾಳ್ ಗ್ರಾಮದ ಚಂದ್ರೇಗೌಡ ಮತ್ತು ಕುಟುಂಬದವರು ವ್ಯಾನ್ ನಲ್ಲಿ ಹೊರನಾಡಿಗೆ ಸಾಗುವಾಗ ಅವಘಡ ಸಂಭವಿಸಿದೆ.

ಚಂದ್ರೇಗೌಡ ಅವರಿಗೆ ತೀವ್ರ ಪೆಟ್ಟಾಗಿದ್ದು , ಮಂಗಳೂರಿಗೆ ಒಯ್ಯಲಾಗಿದೆ. ಇತರ ನಾಲ್ವರಿಗೆ ಮೂಡಿಗೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

'ವ್ಯಾನ್ ಕುಂದೂರು ಬಳಿ ಸಾಗುವಾಗ ಆನೆ ಕಾಣಿಸಿದೆ. ಆನೆ ನೋಡಿ ವ್ಯಾನ್ ನಿಲ್ಲಿಸಿದ್ದಾರೆ. ಆನೆ ಹಿಂದಿನಿಂದ ಬಂದು ತಿವಿದಿದೆ, ವ್ಯಾನು ಉರುಳಿದೆ. ವ್ಯಾನ್ ನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ' ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ನಾಯಕ್ 'ಪ್ರಜಾವಾಣಿ'ಗೆ ತಿಳಿಸಿದರು. ಸ್ಥಳೀಯರು ಕೆಲಕಾಲ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT