'ವ್ಯಾನ್ ಕುಂದೂರು ಬಳಿ ಸಾಗುವಾಗ ಆನೆ ಕಾಣಿಸಿದೆ. ಆನೆ ನೋಡಿ ವ್ಯಾನ್ ನಿಲ್ಲಿಸಿದ್ದಾರೆ. ಆನೆ ಹಿಂದಿನಿಂದ ಬಂದು ತಿವಿದಿದೆ, ವ್ಯಾನು ಉರುಳಿದೆ. ವ್ಯಾನ್ ನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ' ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ನಾಯಕ್ 'ಪ್ರಜಾವಾಣಿ'ಗೆ ತಿಳಿಸಿದರು. ಸ್ಥಳೀಯರು ಕೆಲಕಾಲ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.