‘ನಾಲ್ಕು ವರ್ಷ ಹಿಂದೆ ಕೃಷ್ಣಪ್ಪ ಬಸವನಿಂದ ₹ 3,000 ಸಾಲ ಪಡೆದಿದ್ದರಂತೆ. ಸಾಲದ ಹಣ ವಾಪಸ್ ಕೊಟ್ಟಿಲ್ಲ ಎಂದು ಹಲವು ಬಾರಿ ಜಗಳ ಮಾಡಿದ್ದನಂತೆ. ಮಂಗಳವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಕೃಷ್ಣಪ್ಪ ಪೂಜೆಗೆ ನೀರು ತರಲು ತೋಟಕ್ಕೆ ಹೋಗಿದ್ದಾಗ ಬಸವ ಅವರಿಗೆ ಕತ್ತಿಯಿಂದ ಕುತ್ತಿಗೆ ಇರಿದಿದ್ದಾನೆ. ಆತ ಜೋರಾಗಿ ಕೂಗಿಕೊಂಡಿದ್ದಾನೆ. ತಕ್ಷಣವೇ ಆತನ ಪತ್ನಿ ಪ್ರಮೀಳಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ನಡೆದುದನ್ನು ಕೃಷ್ಣಪ್ಪ ಪತ್ನಿಗೆ ಹೇಳಿದ್ದಾರೆ. ಆಸ್ಪತ್ರೆಗೆ ಒಯ್ಯುಲು ಅವರು ಯತ್ನಿಸಿದ್ದಾರೆ, ಅಷ್ಟರಲ್ಲಿ ಆತ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.