<p><strong>ಚಿಕ್ಕಮಗಳೂರು</strong>: ನಡಿಗೆ ಪಥದಲ್ಲಿ ಮುಳ್ಳುಗಿಡಗಳು, ಉದ್ಯಾನದ ತುಂಬೆಲ್ಲ ಗಿಡಗಂಟಿಗಳು, ಹದಗೆಟ್ಟ ಸೌಂದರ್ಯ, ಕೂರಲು ಆಸನಗಳಿಲ್ಲ, ನಿಲ್ಲಲು ನೆರಳಿಲ್ಲ... ಇದು ನಗರದ ಗಾಂಧಿನಗರ ಉದ್ಯಾನದ ಸ್ಥಿತಿ.</p>.<p>ನಗರದ ಬಿಎಸ್ಎನ್ಎಲ್ ಕಚೇರಿ ಕಡೆಯಿಂದ ಬಂದರೆ ಈ ಉದ್ಯಾನ ಎದುರಾಗುತ್ತದೆ. ಗಾಂಧಿನಗರ ಬಡಾವಣೆಯಲ್ಲಿ ನಗರಸಭೆಯ ವಿಶಾಲವಾದ ಉದ್ಯಾನವಿದ್ದು, ಅಭಿವೃದ್ಧಿ ಮಾತ್ರ ಇಲ್ಲವಾಗಿದೆ.</p>.<p>ನಿತ್ಯ ಇಲ್ಲಿನ ನಿವಾಸಿಗಳು ವಾಯು ವಿಹಾರ, ವಿಶ್ರಾಂತಿಗಾಗಿ ಈ ಉದ್ಯಾನವನ್ನೇ ಅವಲಂಬಿಸಿದ್ದಾರೆ. ಆದರೆ, ಈ ಉದ್ಯಾನದಲ್ಲಿ ನಡಿಗೆ ಪಥದಲ್ಲಿ ಗಿಡಗಳು ಬೆಳೆದು ದಾರಿಯೇ ಕಾಣದಾಗಿದೆ. ಇದರ ನಡುವೆಯೇ ನಿತ್ಯ ನಡಿಗೆ ಮಾಡಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳಿಗಿದೆ.</p>.<p>ಜೊತೆಗೆ ಉದ್ಯಾನದ ತುಂಬೆಲ್ಲ ಮುಳ್ಳು, ಗಿಡಗಂಟಿಗಳು ಬೆಳೆದು ನಿಂತಿವೆ. ಬೆಳಿಗ್ಗೆ ಹಾಗೂ ಸಂಜೆ, ಕತ್ತಲು ವೇಳೆಯಲ್ಲಿ ವಿಹಾರ ಮಾಡಲು, ವಿಶ್ರಾಂತಿ ಪಡೆಯಲು ಸ್ವಲ್ಪ ಆತಂಕವಾಗುತ್ತದೆ. ಎತ್ತರವಾಗಿ ಬೆಳೆದು ನಿಂತ ಗಿಡಗಳಲ್ಲಿ ಹಾವು ಸೇರಿರುವ ಭಯ ಇದೆ. ಈ ಮುಳ್ಳು ಗಿಡಗಳನ್ನು ತೆಗೆದು ಸ್ವಚ್ಛ ಮಾಡಿದರೆ ಅನುಕೂಲವಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.</p>.<p>ಬಡಾವಣೆಯಲ್ಲಿನ ಮಕ್ಕಳು ನಿತ್ಯ ಸಂಜೆ ವೇಳೆ ಪೋಷಕರನ್ನು ಕರೆತರುತ್ತಾರೆ. ಆದರೆ, ಮಕ್ಕಳಿಗೆ ಆಟವಾಡಲು ಆಟಿಕೆ ಸಲಕರಣೆಗಳು ಇಲ್ಲ. ಈಗಾಗಿ ಪೋಷಕರು ಮಕ್ಕಳ ಕರೆತರಲು ಹಿಂದೇಟು ಹಾಕುವಂತಾಗಿದೆ.</p>.<p>ಈ ವಿಶಾಲವಾದ ಪಾರ್ಕ್ನಲ್ಲಿ ವಿಶ್ರಾಂತಿ ಪಡೆಯಲು ಆಸನಗಳು ಇಲ್ಲದಾಗಿದೆ. ಉದ್ಯಾನಕ್ಕೆ ಕೇವಲ ಎರಡೇ ಎರಡು ಬೆಂಚ್ಗಳನ್ನು ಹಾಕಲಾಗಿದೆ. ಇಲ್ಲಿಗೆ ಬರುವವರು ಕಾಂಪೌಂಡಿನ ಕಟ್ಟೆಯ ಮೇಲೆ ಕುಳಿತು ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಇದೆ.</p>.<p>ಜೊತೆಗೆ ಪಾರ್ಕ್ನಲ್ಲಿ ನೆರಳಿಗಾಗಿ ಸರಿಯಾದ ಗಿಡ, ಮರಗಳನ್ನು ಬೆಳೆಸಬೇಕಾಗಿದೆ. ಬಿಸಿಲಿನ ವೇಳೆ ವಿಶ್ರಾಂತಿ ಪಡೆಯಲು ನೆರಳು ಇಲ್ಲದಾಗಿದೆ. ಇರುವ ಒಂದೆರಡು ಮರದ ನೆರಳಿನ ಆಶ್ರಯದಲ್ಲಿ ವಿಶ್ರಮಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು. </p>.<div><blockquote>ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಮುಂದಿನ ಬಜೆಟ್ನಲ್ಲಿ ಹಣ ನಿಗದಿ ಮಾಡಿ ಉದ್ಯಾನ ಅಭಿವೃದ್ಧಿಪಡಿಸಲಾಗುವುದು </blockquote><span class="attribution">ಬಿ.ಸಿ.ಬಸವರಾಜ್ ನಗರಸಭೆ ಆಯುಕ್ತ</span></div>.<p><strong>ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹ</strong> ನಾವು ಹಿರಿಯ ನಾಗರಿಕರು ನಮಗೆ ವಿಶ್ರಾಂತಿ ಮಾಡಲು ಸೂಕ್ತವಾದ ಉದ್ಯಾನ ಇಲ್ಲ ಎಂದು ಇದೇ ಉದ್ಯಾನದಲ್ಲಿ ನಿತ್ಯ ವಾಯು ವಿವಾರ ನಡೆಸುವ ಹಿರಿಯ ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ. ‘ನಡಿಗೆಗೆ ಜಿಲ್ಲಾ ಆಟದ ಮೈದಾನಕ್ಕೆ ಹೋಗವ ಪರಿಸ್ಥಿತಿ ಇದೆ. ನಗರಸಭೆ ಈ ಉದ್ಯಾನ ಅಭಿವೃದ್ಧಿಪಡಿಸಿದರೆ ನಮಗೆ ಮಕ್ಕಳಿಗೆ ಅನುಕೂಲವಾಗಲಿದೆ. ಬಡಾವಣೆಯ ಸೌಂದರ್ಯವೂ ಹೆಚ್ಚಾಗಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ನಡಿಗೆ ಪಥದಲ್ಲಿ ಮುಳ್ಳುಗಿಡಗಳು, ಉದ್ಯಾನದ ತುಂಬೆಲ್ಲ ಗಿಡಗಂಟಿಗಳು, ಹದಗೆಟ್ಟ ಸೌಂದರ್ಯ, ಕೂರಲು ಆಸನಗಳಿಲ್ಲ, ನಿಲ್ಲಲು ನೆರಳಿಲ್ಲ... ಇದು ನಗರದ ಗಾಂಧಿನಗರ ಉದ್ಯಾನದ ಸ್ಥಿತಿ.</p>.<p>ನಗರದ ಬಿಎಸ್ಎನ್ಎಲ್ ಕಚೇರಿ ಕಡೆಯಿಂದ ಬಂದರೆ ಈ ಉದ್ಯಾನ ಎದುರಾಗುತ್ತದೆ. ಗಾಂಧಿನಗರ ಬಡಾವಣೆಯಲ್ಲಿ ನಗರಸಭೆಯ ವಿಶಾಲವಾದ ಉದ್ಯಾನವಿದ್ದು, ಅಭಿವೃದ್ಧಿ ಮಾತ್ರ ಇಲ್ಲವಾಗಿದೆ.</p>.<p>ನಿತ್ಯ ಇಲ್ಲಿನ ನಿವಾಸಿಗಳು ವಾಯು ವಿಹಾರ, ವಿಶ್ರಾಂತಿಗಾಗಿ ಈ ಉದ್ಯಾನವನ್ನೇ ಅವಲಂಬಿಸಿದ್ದಾರೆ. ಆದರೆ, ಈ ಉದ್ಯಾನದಲ್ಲಿ ನಡಿಗೆ ಪಥದಲ್ಲಿ ಗಿಡಗಳು ಬೆಳೆದು ದಾರಿಯೇ ಕಾಣದಾಗಿದೆ. ಇದರ ನಡುವೆಯೇ ನಿತ್ಯ ನಡಿಗೆ ಮಾಡಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳಿಗಿದೆ.</p>.<p>ಜೊತೆಗೆ ಉದ್ಯಾನದ ತುಂಬೆಲ್ಲ ಮುಳ್ಳು, ಗಿಡಗಂಟಿಗಳು ಬೆಳೆದು ನಿಂತಿವೆ. ಬೆಳಿಗ್ಗೆ ಹಾಗೂ ಸಂಜೆ, ಕತ್ತಲು ವೇಳೆಯಲ್ಲಿ ವಿಹಾರ ಮಾಡಲು, ವಿಶ್ರಾಂತಿ ಪಡೆಯಲು ಸ್ವಲ್ಪ ಆತಂಕವಾಗುತ್ತದೆ. ಎತ್ತರವಾಗಿ ಬೆಳೆದು ನಿಂತ ಗಿಡಗಳಲ್ಲಿ ಹಾವು ಸೇರಿರುವ ಭಯ ಇದೆ. ಈ ಮುಳ್ಳು ಗಿಡಗಳನ್ನು ತೆಗೆದು ಸ್ವಚ್ಛ ಮಾಡಿದರೆ ಅನುಕೂಲವಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.</p>.<p>ಬಡಾವಣೆಯಲ್ಲಿನ ಮಕ್ಕಳು ನಿತ್ಯ ಸಂಜೆ ವೇಳೆ ಪೋಷಕರನ್ನು ಕರೆತರುತ್ತಾರೆ. ಆದರೆ, ಮಕ್ಕಳಿಗೆ ಆಟವಾಡಲು ಆಟಿಕೆ ಸಲಕರಣೆಗಳು ಇಲ್ಲ. ಈಗಾಗಿ ಪೋಷಕರು ಮಕ್ಕಳ ಕರೆತರಲು ಹಿಂದೇಟು ಹಾಕುವಂತಾಗಿದೆ.</p>.<p>ಈ ವಿಶಾಲವಾದ ಪಾರ್ಕ್ನಲ್ಲಿ ವಿಶ್ರಾಂತಿ ಪಡೆಯಲು ಆಸನಗಳು ಇಲ್ಲದಾಗಿದೆ. ಉದ್ಯಾನಕ್ಕೆ ಕೇವಲ ಎರಡೇ ಎರಡು ಬೆಂಚ್ಗಳನ್ನು ಹಾಕಲಾಗಿದೆ. ಇಲ್ಲಿಗೆ ಬರುವವರು ಕಾಂಪೌಂಡಿನ ಕಟ್ಟೆಯ ಮೇಲೆ ಕುಳಿತು ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಇದೆ.</p>.<p>ಜೊತೆಗೆ ಪಾರ್ಕ್ನಲ್ಲಿ ನೆರಳಿಗಾಗಿ ಸರಿಯಾದ ಗಿಡ, ಮರಗಳನ್ನು ಬೆಳೆಸಬೇಕಾಗಿದೆ. ಬಿಸಿಲಿನ ವೇಳೆ ವಿಶ್ರಾಂತಿ ಪಡೆಯಲು ನೆರಳು ಇಲ್ಲದಾಗಿದೆ. ಇರುವ ಒಂದೆರಡು ಮರದ ನೆರಳಿನ ಆಶ್ರಯದಲ್ಲಿ ವಿಶ್ರಮಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು. </p>.<div><blockquote>ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಮುಂದಿನ ಬಜೆಟ್ನಲ್ಲಿ ಹಣ ನಿಗದಿ ಮಾಡಿ ಉದ್ಯಾನ ಅಭಿವೃದ್ಧಿಪಡಿಸಲಾಗುವುದು </blockquote><span class="attribution">ಬಿ.ಸಿ.ಬಸವರಾಜ್ ನಗರಸಭೆ ಆಯುಕ್ತ</span></div>.<p><strong>ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹ</strong> ನಾವು ಹಿರಿಯ ನಾಗರಿಕರು ನಮಗೆ ವಿಶ್ರಾಂತಿ ಮಾಡಲು ಸೂಕ್ತವಾದ ಉದ್ಯಾನ ಇಲ್ಲ ಎಂದು ಇದೇ ಉದ್ಯಾನದಲ್ಲಿ ನಿತ್ಯ ವಾಯು ವಿವಾರ ನಡೆಸುವ ಹಿರಿಯ ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ. ‘ನಡಿಗೆಗೆ ಜಿಲ್ಲಾ ಆಟದ ಮೈದಾನಕ್ಕೆ ಹೋಗವ ಪರಿಸ್ಥಿತಿ ಇದೆ. ನಗರಸಭೆ ಈ ಉದ್ಯಾನ ಅಭಿವೃದ್ಧಿಪಡಿಸಿದರೆ ನಮಗೆ ಮಕ್ಕಳಿಗೆ ಅನುಕೂಲವಾಗಲಿದೆ. ಬಡಾವಣೆಯ ಸೌಂದರ್ಯವೂ ಹೆಚ್ಚಾಗಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>