ನಾಲ್ಕೈದು ದಿನಗಳಿಂದ ಬಣಕಲ್, ಬಾಳೂರು, ಕೊಟ್ಟಿಗೆಹಾರ, ತರುವೆ, ಬಿನ್ನಡಿ, ಬಣಕಲ್, ನಿಡುವಾಳೆ, ಚಕ್ಕೋಡು ಸೇರಿದಂತೆ ಹಲವು ಕಡೆ ಗಾಳಿಯಿಂದ ಕೂಡಿದ ಧಾರಾಕಾರ ಮಳೆಯು ರೈತರ ನಿದ್ದೆಯನ್ನು ಕಂಗೆಡಿಸಿದೆ. ಕಷ್ಟಪಟ್ಟು ಬೆಳೆಗೆ ಔಷಧಿ ಸಿಂಪಡಿಸಿ ಇನ್ನೇನು ಉತ್ತಮ ಫಸಲು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಮಳೆ ನಿರಾಸೆ ತಂದೊಡ್ಡಿದೆ.