<p><strong>ಕಡೂರು:</strong> ತಾಲ್ಲೂಕು ಸರ್ವೆ ಅಭಿಲೇಖಾಲಯದ ಕೊಠಡಿ ಮಳೆಗೆ ಸೋರುತ್ತಿವೆ. ತೊಟ್ಟಿಕ್ಕುವ ಹನಿಗಳಿಂದ ಭೂದಾಖಲೆಗಳು ಹಾಳಾಗುತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. </p>.<p>ಕಡೂರು ತಾಲ್ಲೂಕು ಕಚೇರಿ ಮೇಲ್ಭಾಗದಲ್ಲಿರುವ ಸರ್ವೆ ಅಭಿಲೇಖಾಲಯದಲ್ಲಿ 120 ವರ್ಷಗಳ ಹಿಂದಿನ ಹಳೆಯ ದಾಖಲೆಗಳು, ತಾಲ್ಲೂಕಿನ ಕೃಷಿ, ಸರ್ಕಾರಿ, ಅರಣ್ಯ ಜಮೀನುಗಳ ಮೂಲ ದಾಖಲೆಗಳು, ಆಕಾರ ಬಂದ್, ಆರ್.ಆರ್. ಪಕ್ಕಾ, ಟಿಪ್ಪಣಿ ಮುಂತಾದ ಪ್ರಮುಖ ದಾಖಲೆಗಳಿವೆ.</p>.<p>ಮಳೆಯಿಂದ ದಾಖಲೆಗಳನ್ನು ಸಂರಕ್ಷಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸ್ವಂತ ವೆಚ್ಚದಿಂದ ಕೊಠಡಿ ಮೇಲ್ಭಾಗಕ್ಕೆ ಟಾರ್ಪಾಲ್ ಕಟ್ಟಿದ್ದಾರೆ. ಆದರೂ, ಬಹಳಷ್ಟು ದಾಖಲೆಗಳು ನೀರಿನಲ್ಲಿ ನೆನೆದು ಅಕ್ಷರಗಳು ಅಳಿಸಿಹೋಗಿವೆ. ಬ್ರಿಟಿಷರ ಕಾಲದ ಕೆಲವು ದಾಖಲೆಗಳು ಸಹ ಇಲ್ಲಿದ್ದು, ಅವುಗಳನ್ನು ಸೂಕ್ಷ್ಮವಾಗಿ ತೆಗೆದು ನೋಡಬೇಕಾಗುತ್ತದೆ. ಈ ದಾಖಲೆಗಳ ಮೇಲೆ ನೀರು ಬಿದ್ದರೆ ಸಂಪೂರ್ಣ ನಾಶವಾಗುವ ಸಂಭವವಿದ್ದು, ಕೂಡಲೇ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.</p>.<p>‘ಟಾರ್ಪಾಲ್ ಹಾಕಿರುವುದು ತಾತ್ಕಾಲಿಕ ವ್ಯವಸ್ಥೆ. ಸತತವಾಗಿ ಮಳೆ ಬಂದರೆ ಇಲ್ಲಿರುವ ಎಲ್ಲ ದಾಖಲೆಗಳು ನಾಶವಾಗುವ ಸಂಭವವಿದ್ದು, ಸಂಬಂಧಿಸಿದವರು ಕೂಡಲೇ ಸರ್ವೆ ಅಭಿಲೇಖಾಲಯಕ್ಕೆ ಸುರಕ್ಷಿತ ಕೊಠಡಿ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.</p>.<p>ಸರ್ವೆ ದಾಖಲೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ದಾಖಲೆಗಳನ್ನು ಕೂಡಲೇ ಸುರಕ್ಷಿತ ಕೊಠಡಿಗೆ ಸ್ಥಳಾಂತರಿಸಬೇಕು. </p><p><strong>-ಟೊಮೆಟೊ ಗೌಡ ಸರಸ್ವತೀಪುರ</strong></p>.<p>ಎಲ್ಲ ದಾಖಲೆಗಳನ್ನು ಶೀಘ್ರ ಡಿಜಿಟಲೈಸ್ ಮಾಡಬೇಕು. ಅಲ್ಲಿಯ ತನಕ ದಾಖಲೆಗಳನ್ನು ಸುರಕ್ಷಿತವಾಗಿಡಲು ತುರ್ತು ಕ್ರಮ ಕೈಗೊಳ್ಳಬೇಕು. </p><p><strong>-ಸಿ.ಎಸ್. ಮಧುಸೂದನ್ ಚೆನ್ನಾಪುರ</strong></p>.<p>ಭೂ ದಾಖಲೆಗಳ ರಕ್ಷಣೆಗೆ ಸೂಕ್ತ ಕ್ರಮಕ್ಕೆ ವಿನಂತಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗುವುದು </p><p>-<strong>ಟಿ.ಕೆ. ಲೋಹಿತ್ ಸರ್ವೆ ಭೂ ದಾಖಲೆಗಳ ಉಪನಿರ್ದೇಶಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು:</strong> ತಾಲ್ಲೂಕು ಸರ್ವೆ ಅಭಿಲೇಖಾಲಯದ ಕೊಠಡಿ ಮಳೆಗೆ ಸೋರುತ್ತಿವೆ. ತೊಟ್ಟಿಕ್ಕುವ ಹನಿಗಳಿಂದ ಭೂದಾಖಲೆಗಳು ಹಾಳಾಗುತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. </p>.<p>ಕಡೂರು ತಾಲ್ಲೂಕು ಕಚೇರಿ ಮೇಲ್ಭಾಗದಲ್ಲಿರುವ ಸರ್ವೆ ಅಭಿಲೇಖಾಲಯದಲ್ಲಿ 120 ವರ್ಷಗಳ ಹಿಂದಿನ ಹಳೆಯ ದಾಖಲೆಗಳು, ತಾಲ್ಲೂಕಿನ ಕೃಷಿ, ಸರ್ಕಾರಿ, ಅರಣ್ಯ ಜಮೀನುಗಳ ಮೂಲ ದಾಖಲೆಗಳು, ಆಕಾರ ಬಂದ್, ಆರ್.ಆರ್. ಪಕ್ಕಾ, ಟಿಪ್ಪಣಿ ಮುಂತಾದ ಪ್ರಮುಖ ದಾಖಲೆಗಳಿವೆ.</p>.<p>ಮಳೆಯಿಂದ ದಾಖಲೆಗಳನ್ನು ಸಂರಕ್ಷಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸ್ವಂತ ವೆಚ್ಚದಿಂದ ಕೊಠಡಿ ಮೇಲ್ಭಾಗಕ್ಕೆ ಟಾರ್ಪಾಲ್ ಕಟ್ಟಿದ್ದಾರೆ. ಆದರೂ, ಬಹಳಷ್ಟು ದಾಖಲೆಗಳು ನೀರಿನಲ್ಲಿ ನೆನೆದು ಅಕ್ಷರಗಳು ಅಳಿಸಿಹೋಗಿವೆ. ಬ್ರಿಟಿಷರ ಕಾಲದ ಕೆಲವು ದಾಖಲೆಗಳು ಸಹ ಇಲ್ಲಿದ್ದು, ಅವುಗಳನ್ನು ಸೂಕ್ಷ್ಮವಾಗಿ ತೆಗೆದು ನೋಡಬೇಕಾಗುತ್ತದೆ. ಈ ದಾಖಲೆಗಳ ಮೇಲೆ ನೀರು ಬಿದ್ದರೆ ಸಂಪೂರ್ಣ ನಾಶವಾಗುವ ಸಂಭವವಿದ್ದು, ಕೂಡಲೇ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.</p>.<p>‘ಟಾರ್ಪಾಲ್ ಹಾಕಿರುವುದು ತಾತ್ಕಾಲಿಕ ವ್ಯವಸ್ಥೆ. ಸತತವಾಗಿ ಮಳೆ ಬಂದರೆ ಇಲ್ಲಿರುವ ಎಲ್ಲ ದಾಖಲೆಗಳು ನಾಶವಾಗುವ ಸಂಭವವಿದ್ದು, ಸಂಬಂಧಿಸಿದವರು ಕೂಡಲೇ ಸರ್ವೆ ಅಭಿಲೇಖಾಲಯಕ್ಕೆ ಸುರಕ್ಷಿತ ಕೊಠಡಿ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.</p>.<p>ಸರ್ವೆ ದಾಖಲೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ದಾಖಲೆಗಳನ್ನು ಕೂಡಲೇ ಸುರಕ್ಷಿತ ಕೊಠಡಿಗೆ ಸ್ಥಳಾಂತರಿಸಬೇಕು. </p><p><strong>-ಟೊಮೆಟೊ ಗೌಡ ಸರಸ್ವತೀಪುರ</strong></p>.<p>ಎಲ್ಲ ದಾಖಲೆಗಳನ್ನು ಶೀಘ್ರ ಡಿಜಿಟಲೈಸ್ ಮಾಡಬೇಕು. ಅಲ್ಲಿಯ ತನಕ ದಾಖಲೆಗಳನ್ನು ಸುರಕ್ಷಿತವಾಗಿಡಲು ತುರ್ತು ಕ್ರಮ ಕೈಗೊಳ್ಳಬೇಕು. </p><p><strong>-ಸಿ.ಎಸ್. ಮಧುಸೂದನ್ ಚೆನ್ನಾಪುರ</strong></p>.<p>ಭೂ ದಾಖಲೆಗಳ ರಕ್ಷಣೆಗೆ ಸೂಕ್ತ ಕ್ರಮಕ್ಕೆ ವಿನಂತಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗುವುದು </p><p>-<strong>ಟಿ.ಕೆ. ಲೋಹಿತ್ ಸರ್ವೆ ಭೂ ದಾಖಲೆಗಳ ಉಪನಿರ್ದೇಶಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>