ಸಾಮಾನ್ಯವಾಗಿ ಸರ್ಕಾರಿ ಭೂಮಿ ಅರ್ಹ ವ್ಯಕ್ತಿಗಳಿಗೆ ಮಂಜೂರು ಮಾಡಬೇಕಾದರೆ ಬಗರು ಹುಕುಂ ಸಮಿತಿಯ 3 ಸಭೆಗಳ ಮೂಲಕ ಪರಿಶೀಲನೆ ನಡೆಸಿ, ಆ ವ್ಯಕ್ತಿಯ ಕಡತ ಅರ್ಹತೆ ಇದ್ದರೆ ಅನುಮೋದನೆ ಗೊಳ್ಳುತ್ತದೆ. ಆನಂತರ ಹಕ್ಕು ಬದಲಾವಣೆಯ ಸೂಚನೆ ಫಲಾನುಭ ವಿಗೆ ತಲುಪಿದ ನಂತರ ಪಹಣಿ ಬದಲಾವಣೆಗೆ ಸೂಚನೆ ನೀಡಿರುವ ಕಡತ ಭೂಮಿ ಕೇಂದ್ರಕ್ಕೆ ಬರುತ್ತದೆ. ಗ್ರಾಮಲೆಕ್ಕಿಗರು ಲಾಗಿನ್ ಮೂಲಕ ಅನುಮತಿ ನೀಡಿ, ನಂತರ ಕಂದಾಯ ನಿರೀಕ್ಷಕರ ಅಭಿಪ್ರಾಯ ಪಡೆದ ಮೇಲೆ ತಹಶೀಲ್ದಾರ್ ಹೆಬ್ಬೆಟ್ಟು ಗುರುತು ನೀಡಿ ಅನುಮೋದಿಸಿದ ನಂತರವೇ ಪಹಣಿ ಫಲಾನುಭವಿಯ ಕೈಸೇರುತ್ತದೆ.