ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆಮುಖ, ಕಳಸದಲ್ಲಿ ಧಾರಾಕಾರ ಮಳೆ: ಭದ್ರಾ ಒಡಲು ಭರ್ತಿ

Published 23 ಜುಲೈ 2023, 13:52 IST
Last Updated 23 ಜುಲೈ 2023, 13:52 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳ ಸತತ ಮಳೆಯಿಂದ ಭದ್ರಾ ನದಿಯ ಒಡಲು ಭರ್ತಿ ಆಗಿದೆ.

ಮಂಗಳವಾರದಿಂದ ಕಳಸದಲ್ಲಿ ಕ್ರಮವಾಗಿ 2.4 ಸೆಂ.ಮೀ., 3.3 ಸೆಂ.ಮೀ. 11 ಸೆಂ.ಮೀ., 4.5 ಸೆಂ.ಮೀ., ಶನಿವಾರ 6 ಸೆಂ.ಮೀ, ಭಾನುವಾರ ಬೆಳಿಗ್ಗೆವರೆಗೆ 12 ಸೆಂ.ಮೀ ಮಳೆ ಆಗಿದೆ. ಸಂಸೆ, ಕುದುರೆಮುಖ ಪ್ರದೇಶದಲ್ಲಿ ಇದಕ್ಕಿಂತ ಹೆಚ್ಚು ಮಳೆ ಆಗಿದೆ.

ಎಲ್ಲ ಹಳ್ಳಗಳು, ಸೋಮಾವತಿ ನದಿ ತುಂಬಿದೆ. ಪರಿಣಾಮವಾಗಿ ಭದ್ರಾ ನದಿಯು ವರ್ಷದ ಅತ್ಯಂತ ಗರಿಷ್ಠ ಮಟ್ಟದಲ್ಲಿ ಹರಿಯುತ್ತಿದೆ.

ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆಯ ಸೇತುವೆ ಮೇಲೆ ದಿನವಿಡೀ ಹರಿಯಿತು. ಇದರಿಂದ ಹೊರನಾಡು, ಕಳಸಕ್ಕೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರಿಗೆ ತೊಂದರೆ ಎದುರಾಯಿತು.

ಕಳಸ-ಕುದುರೆಮುಖ ರಸ್ತೆಯ ನೆಲ್ಲಿಬೀಡು ಸೇತುವೆ ಮೇಲೆ ನೀರು ಹರಿದಿದ್ದರಿಂದ ಕಾರ್ಕಳ, ಮಂಗಳೂರು ಸಂಚಾರಕ್ಕೆ ಅಡಚಣೆ ಆಗಿತ್ತು.

ಕಳಸ-ಕುದುರೆಮುಖ ರಸ್ತೆಯ ನೆಲ್ಲಿಬೀಡು ಬಳಿ ಭಾನುವಾರ ಭದ್ರಾ ನದಿ ನೀರು ಹೆದ್ದಾರಿ ಮೇಲೆ ಹರಿದು ಸಂಚಾರಕ್ಕೆ ತೊಡಕು ಆಗಿತ್ತು
ಕಳಸ-ಕುದುರೆಮುಖ ರಸ್ತೆಯ ನೆಲ್ಲಿಬೀಡು ಬಳಿ ಭಾನುವಾರ ಭದ್ರಾ ನದಿ ನೀರು ಹೆದ್ದಾರಿ ಮೇಲೆ ಹರಿದು ಸಂಚಾರಕ್ಕೆ ತೊಡಕು ಆಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT