ಚಾರ್ಮಾಡಿಯ ಮನೆಯೊಂದರ ಬಳಿ ಓಡಾಡುತ್ತಿದ್ದ ಕಾಳಿಂಗ ಸರ್ಪ ಹಾಗೂ ಎರಡು ತಲೆ ಹಾವನ್ನು ಉಜಿರೆಯ ಉರಗಪ್ರೇಮಿ ಸ್ನೇಕ್ ಜಾಯ್ ಸೆರೆ ಹಿಡಿದು ಚಾರ್ಮಾಡಿಯ ಅರಣ್ಯಕ್ಕೆ ಬಿಟ್ಟರು. ಈವರೆಗೆ ಅವರು ಏಳೂವರೆ ಸಾವಿರ ಹಾವುಗಳನ್ನು ಸೆರೆ ಹಿಡಿದು ಸುರಕ್ಷಿತ ಅರಣ್ಯಕ್ಕೆ ಬಿಟ್ಟಿರುವುದಾಗಿ ಸ್ನೇಕ್ ಜಾಯ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.