ಮಲೆನಾಡಿನ ಹೆಸರಾಂತ ಸಂಸ್ಥೆಯೊಂದು ಮೂರು ದಶಕಗಳ ಕಾಲ ಜನರಿಗೆ ಸಾರಿಗೆ ಸೇವೆ ಒದಗಿಸುತ್ತಾ ಬಂದಿತ್ತು. ಕುಗ್ರಾಮಗಳಿಗೂ ಸಂಪರ್ಕ ವ್ಯವಸ್ಥೆ ಕಲ್ಪಿಸಿತ್ತು. ಸಹಕಾರ ತತ್ವದಡಿ ಕಾರ್ಮಿಕರೇ ಕಟ್ಟಿ ಬೆಳೆಸಿದ ಏಕೈಕ ಸಂಸ್ಥೆ ಎಂದು ಏಷ್ಯಾ ಖಂಡದಲ್ಲಿಯೇ ಹೆಸರು ಪಡೆದಿತ್ತು. ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೆ, ಕೂಲಿ ಕಾರ್ಮಿಕರಿಗೆ ನಿಗದಿತ ಸಮಯದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದ ಹೆಗ್ಗಳಿಕೆ ಇತ್ತು.