ಮೂಡಿಗೆರೆ: ನಾವು ನಿರ್ವಹಿಸುವ ಕೆಲಸದಲ್ಲಿ ತೋರಿಸುವ ಕರ್ತವ್ಯ ನಿಷ್ಠೆಯು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊ ಯ್ಯುತ್ತದೆ ಎಂದು ಕೆಎಸ್ಆರ್ಟಿಸಿ ವಿಭಾಗೀಯ ಎಂಜಿನಿಯರ್ ರಮೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಿದರಹಳ್ಳಿಯಲ್ಲಿರುವ ಕೆಎಸ್ಆರ್ಟಿಸಿ ಘಟಕದಲ್ಲಿ ಸಿಬ್ಬಂದಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿಬ್ಬಂದಿ ದಶರಥ, ರಾಜೇಗೌಡ, ರಾಮಗೊಂಡಬಿರದಾರ, ವೆಂಕನಗೌಡ, ಸಿದ್ದೇಶ್, ಸುನೀಲ್ ಜಂಗಮಶೆಟ್ಟಿ ಅವರನ್ನು ಗೌರವಿಸಲಾಯಿತು.