ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಭೂಕುಸಿತ: ಪುನರ್ವಸತಿ ಮರೀಚಿಕೆ; ಐದು ವರ್ಷಗಳಿಂದ ತಪ್ಪದ ಗೋಳು

Published : 1 ಜುಲೈ 2024, 7:12 IST
Last Updated : 1 ಜುಲೈ 2024, 7:12 IST
ಫಾಲೋ ಮಾಡಿ
Comments
ಮೂಡಿಗೆರೆ ತಾಲ್ಲೂಕಿನ ಮಲೆಮನೆಯಲ್ಲಿ 2019 ರಲ್ಲಿ ಸುರಿದ ಮಳೆಗೆ ಮನೆಹಾನಿಯಾಗಿದ್ದ ದೃಶ್ಯ
ಮೂಡಿಗೆರೆ ತಾಲ್ಲೂಕಿನ ಮಲೆಮನೆಯಲ್ಲಿ 2019 ರಲ್ಲಿ ಸುರಿದ ಮಳೆಗೆ ಮನೆಹಾನಿಯಾಗಿದ್ದ ದೃಶ್ಯ
ಮೂಡಿಗೆರೆ ತಾಲ್ಲೂಕಿನ ಮಲೆಮನೆಯಲ್ಲಿ 2019 ರಲ್ಲಿ ಸುರಿದ ಮಳೆಗೆ ಮನೆಹಾನಿಯಾಗಿದ್ದ ದೃಶ್ಯ
ಮೂಡಿಗೆರೆ ತಾಲ್ಲೂಕಿನ ಮಲೆಮನೆಯಲ್ಲಿ 2019 ರಲ್ಲಿ ಸುರಿದ ಮಳೆಗೆ ಮನೆಹಾನಿಯಾಗಿದ್ದ ದೃಶ್ಯ
ಚನ್ನಡಲು: 5 ವರ್ಷ ಕಳೆದರೂ ಪುನರ್ವಸತಿ ಇಲ್ಲ
ಕಳಸ: ತಾಲ್ಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿಗೆ ಒಳಪಡುವ ಚನ್ನಡಲು ಗ್ರಾಮದಲ್ಲಿ 2019ರ ಆಗಸ್ಟ್ ತಿಂಗಳಲ್ಲಿ ನಡೆದ ಭೂಕುಸಿತದಿಂದ ಇಡೀ ಗ್ರಾಮದಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಗಿತ್ತು.  ಅನೇಕ ಮನೆಗಳಿಗೆ ತೋಟಗಳಿಗೆ ಹಾನಿಯಾಗಿತ್ತು. ಓರ್ವ ನಿವಾಸಿಯ ಪ್ರಾಣಹಾನಿ ಕೂಡ ಆಗಿತ್ತು. ಆಗಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಇಡೀ ಗ್ರಾಮವನ್ನು ಅಲ್ಲಿಂದ ಸ್ಥಳಾಂತರ ಮಾಡುವ ಯೋಜನೆ ರೂಪಿಸಿದ್ದರು. ಕಳಸ ಪಂಚಾಯಿತಿ ವ್ಯಾಪ್ತಿಯ ಕುಂಬಳಡಿಕೆಯಲ್ಲಿ ನಿವೇಶನ ನೀಡುವ ಯೋಜನೆಗೆ ಚನ್ನಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಆನಂತರದ 3 ವರ್ಷದ ಸಂತ್ರಸ್ತರ ಹೋರಾಟ ಮತ್ತು ಇಲಾಖೆಗಳ ಮಂದಗತಿಯ ಕಾರ್ಯನಿರ್ವಹಣೆಯಲ್ಲಿ ಇಡಕಿಣಿ ಗ್ರಾಮದ ಓಡಿನಕುಡಿಗೆ ಬಳಿ ನಿವೇಶನ ನೀಡಲು ಕಂದಾಯ ಇಲಾಖೆ ಒಪ್ಪಿತು. ಆದರೆ ಚನ್ನಡಲಿನ 16 ಕುಟುಂಬಗಳು ಮಾತ್ರ ಸ್ಥಳಾಂತರ ಆಗುವ ಪ್ರಸ್ತಾಪಕ್ಕೆ ಒಪ್ಪಿದ್ದರು. ಸಂತ್ರಸ್ತರು ಅಲ್ಲಿ ಮನೆಗಳಿಗೆ ಅಡಿಪಾಯ ಮಾಡಿಕೊಂಡಿದ್ದಾರೆ. ಆದರೆ ಈವರೆಗೂ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಆಗಿಲ್ಲ. ಮಳೆ ಹೆಚ್ಚಾದಾಗ ಚನ್ನಡಲು ಗ್ರಾಮಸ್ಥರು ಈಗಲೂ ಭೂಕುಸಿತದ ಭೀತಿಯಲ್ಲೇ ಜೀವನ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT