ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಮರಿಯ ಜಯಂತಿ ಸಹಬಾಳ್ವೆ, ಸಹಕಾರ ಜೀವನದ ತತ್ವಗಳಾಗಲಿ

Last Updated 9 ಸೆಪ್ಟೆಂಬರ್ 2022, 2:36 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಗುರುವಾರ ಕ್ರೈಸ್ತರು ಮಾತೆ ಮರಿಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು.

ಪಟ್ಟಣದ ಸಂತ ಅಂತೋಣಿ ಚರ್ಚ್ನಲ್ಲಿ ಬೆಳಿಗ್ಗೆ ಬಾಲಿಕಾ ಮರಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಬಲಿಪೂಜೆ ಅರ್ಪಿಸಲಾಯಿತು. ಬಳಿಕ ಕಬ್ಬು ವಿತರಿಸಿ ಹೊಸಕ್ಕಿ ಸಹಬೋಜನ ನಡೆಸಲಾಯಿತು. ಹಬ್ಬದ ಅಂಗವಾಗಿ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಪಾಳ್ಯ ಚರ್ಚ್‌ ಧರ್ಮಗುರು ಫಾ. ಸಿರಿಲ್ ಆನಂದ್ ಮಾತನಾಡಿ ‘ಮಾತೆ ಮರಿಯ ಅವರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಈ ಹಬ್ಬದ ಮೂಲಕ ಹೊಸಕ್ಕಿಯನ್ನು ಸೇವಿಸಿ ಕುಟುಂಬದವರೆಲ್ಲಾ ಅನೋನ್ಯವಾಗಿ ಬದದುಕುವ ಸಂದೇಶವನ್ನು ಜಗತ್ತಿಗೆ ಸಾರಬೇಕಿದೆ’ ಎಂದರು.

ಸಂತ ಅಂತೋಣಿ ಚರ್ಚ್ ಧರ್ಮಗುರು ಸುನೀಲ್ ರೋಡ್ರಿಗಸ್ ಮಾತನಾಡಿ, ‘ಸಮಾಜದಲ್ಲೂ ಏಕತೆಗಾಗಿ ದುಡಿಯಬೇಕು. ಸಮಾಜದಲ್ಲಿ ನಮಗಿಂತ ಕೆಳಹಂತದಲ್ಲಿರುವ ವ್ಯಕ್ತಿಗಳನ್ನು ಕೈ ಹಿಡಿದು ಎತ್ತುವ ಕೆಲಸ ಮಾಡಬೇಕು ’ ಎಂದರು.

ಮಾತೆ ಮರಿಯ ಅವರಿಗೆ ಉಡಿಸಿದ್ದ ಸೀರೆ ಹರಾಜು ನಡೆಸಲಾಯಿತು. ದೇವಾಲಯದ ಒಳಭಾಗ ಹಾಗೂ ಬಾಲಿಕ ಮಾತೆ ಮರಿಯ ಪ್ರತಿಮೆಯನ್ನು ಆಕರ್ಷಕ ಅಲಂಕಾರ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT