ಪಟ್ಟಣದ ಸಂತ ಅಂತೋಣಿ ಚರ್ಚ್ನಲ್ಲಿ ಬೆಳಿಗ್ಗೆ ಬಾಲಿಕಾ ಮರಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಬಲಿಪೂಜೆ ಅರ್ಪಿಸಲಾಯಿತು. ಬಳಿಕ ಕಬ್ಬು ವಿತರಿಸಿ ಹೊಸಕ್ಕಿ ಸಹಬೋಜನ ನಡೆಸಲಾಯಿತು. ಹಬ್ಬದ ಅಂಗವಾಗಿ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.
ಪಾಳ್ಯ ಚರ್ಚ್ ಧರ್ಮಗುರು ಫಾ. ಸಿರಿಲ್ ಆನಂದ್ ಮಾತನಾಡಿ ‘ಮಾತೆ ಮರಿಯ ಅವರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಈ ಹಬ್ಬದ ಮೂಲಕ ಹೊಸಕ್ಕಿಯನ್ನು ಸೇವಿಸಿ ಕುಟುಂಬದವರೆಲ್ಲಾ ಅನೋನ್ಯವಾಗಿ ಬದದುಕುವ ಸಂದೇಶವನ್ನು ಜಗತ್ತಿಗೆ ಸಾರಬೇಕಿದೆ’ ಎಂದರು.
ಸಂತ ಅಂತೋಣಿ ಚರ್ಚ್ ಧರ್ಮಗುರು ಸುನೀಲ್ ರೋಡ್ರಿಗಸ್ ಮಾತನಾಡಿ, ‘ಸಮಾಜದಲ್ಲೂ ಏಕತೆಗಾಗಿ ದುಡಿಯಬೇಕು. ಸಮಾಜದಲ್ಲಿ ನಮಗಿಂತ ಕೆಳಹಂತದಲ್ಲಿರುವ ವ್ಯಕ್ತಿಗಳನ್ನು ಕೈ ಹಿಡಿದು ಎತ್ತುವ ಕೆಲಸ ಮಾಡಬೇಕು ’ ಎಂದರು.
ಮಾತೆ ಮರಿಯ ಅವರಿಗೆ ಉಡಿಸಿದ್ದ ಸೀರೆ ಹರಾಜು ನಡೆಸಲಾಯಿತು. ದೇವಾಲಯದ ಒಳಭಾಗ ಹಾಗೂ ಬಾಲಿಕ ಮಾತೆ ಮರಿಯ ಪ್ರತಿಮೆಯನ್ನು ಆಕರ್ಷಕ ಅಲಂಕಾರ ಮಾಡಲಾಗಿತ್ತು.