<p><strong>ಚಿಕ್ಕಮಗಳೂರು</strong>: ಗವನಹಳ್ಳಿಯ ಯುವಕ ಧ್ರುವರಾಜ್ ಅರಸ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ. ವಸ್ತಾರೆಯ ಪ್ರಮೋದ್, ಅವರ ಸಹೋದರ ಪ್ರಜ್ವಲ್ ಬಂಧಿತರು.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ಕೃತ್ಯಕ್ಕೆ ಹಣಕಾಸಿನ ವಿಚಾರದ ಗಲಾಟೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>‘ಪ್ರಮೋದ್ ಭದ್ರಾವತಿಯಲ್ಲಿ ಹಾಗೂ ಪ್ರಜ್ವಲ್ ವಸ್ತಾರೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇನ್ನು ಇಬ್ಬರು ಆರೋಪಿಗಳು ಪವನ್, ಲುಕಿತ್ ಪತ್ತೆಗೆ ಬಲೆ ಬೀಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ನಗರದ ಕೋಟೆ ಬಡಾವಣೆಯ ನೀರಿನ ಟ್ಯಾಂಕ್ ಬಳಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಧ್ರುವರಾಜ್ ಅರಸ್ ಹೊಟ್ಟೆಗೆ ಚೂರಿಯಿಂದ ಇರಿದಿದ್ದರು. ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು, ಕೆಲಹೊತ್ತಿನಲ್ಲಿ ಮೃತಪಟ್ಟಿದ್ದರು.</p>.<p>‘ಸೋಮವಾರ ರಾತ್ರಿ 7.30ರ ಹೊತ್ತಿನಲ್ಲಿ ಕೋಟೆಯ ನೀರಿನ ಟ್ಯಾಂಕ್ ಪ್ರದೇಶದಲ್ಲಿ ಧ್ರುವರಾಜ್ ಅರಸ್ ಮತ್ತು ಪ್ರಮೋದ್ಗೆ ಗಲಾಟೆಯಾಯಿತು. ಸಾಲ ಕೊಡಿಸಿರುವ ₹ 20 ಸಾವಿರವನ್ನು ವಾಪಸ್ ಕೊಡುವಂತೆ ಪ್ರಮೋದ್ ದಬಾಯಿಸಿದರು.</p>.<p>ಸಾಲ ವಾಪಸ್ ನೀಡಲು ಎರಡು ದಿನ ಕಾಲಾವಕಾಶ ಬೇಕು ಎಂದು ನಿಮ್ಮ ಅಣ್ಣನಿಗೆ ನಿನ್ನೆಯೇ (ಏ.3) ಹೇಳಿದ್ದೇನೆ ಎಂದು ಧ್ರುವರಾಜ್ ಅರಸ್ ಆತನಿಗೆ ಹೇಳಿದರು. ಅಷ್ಟರಲ್ಲಿ ಅಲ್ಲಿಗೆ ದ್ವಿಚಕ್ರವಾಹನದಲ್ಲಿ ಇಬ್ಬರು ಬಂದರು. ಆ ವಾಹನದಲ್ಲಿದ್ದ ಒಬ್ಬನಿಂದ ಪ್ರಮೋದ್ ಚೂರಿ ತೆಗೆದುಕೊಂಡು ಧ್ರುವರಾಜ್ನ ಎಡಪಕ್ಕೆಗೆ ಚುಚ್ಚಿದರು. ನಂತರ, ಮೂವರು ದ್ವಿಚಕ್ರವಾಹನದಲ್ಲಿ ಪರಾರಿಯಾದರು. ಧ್ರುವರಾಜ್ ಅವರನ್ನು ಆಸ್ಪತ್ರೆಗೆ ಒಯ್ದೆವು, ಅಲ್ಲಿ ಅವರು ಮೃತಪಟ್ಟರು’ ಎಂದು ದೂರಿನಲ್ಲಿ ದೂರುದಾರ ತಿಳಿಸಿದ್ದಾರೆ.</p>.<p>ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಐಪಿಸಿ 302 (ಕೊಲೆ), 34 (ಅಪರಾಧ ಸಂಚು), 504 (ಶಾಂತಿಭಂಗ), 506 (ಬೆದರಿಕೆ) ಪ್ರಕರಣ ದಾಖಲಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಗವನಹಳ್ಳಿಯ ಯುವಕ ಧ್ರುವರಾಜ್ ಅರಸ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ. ವಸ್ತಾರೆಯ ಪ್ರಮೋದ್, ಅವರ ಸಹೋದರ ಪ್ರಜ್ವಲ್ ಬಂಧಿತರು.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ಕೃತ್ಯಕ್ಕೆ ಹಣಕಾಸಿನ ವಿಚಾರದ ಗಲಾಟೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>‘ಪ್ರಮೋದ್ ಭದ್ರಾವತಿಯಲ್ಲಿ ಹಾಗೂ ಪ್ರಜ್ವಲ್ ವಸ್ತಾರೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇನ್ನು ಇಬ್ಬರು ಆರೋಪಿಗಳು ಪವನ್, ಲುಕಿತ್ ಪತ್ತೆಗೆ ಬಲೆ ಬೀಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ನಗರದ ಕೋಟೆ ಬಡಾವಣೆಯ ನೀರಿನ ಟ್ಯಾಂಕ್ ಬಳಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಧ್ರುವರಾಜ್ ಅರಸ್ ಹೊಟ್ಟೆಗೆ ಚೂರಿಯಿಂದ ಇರಿದಿದ್ದರು. ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು, ಕೆಲಹೊತ್ತಿನಲ್ಲಿ ಮೃತಪಟ್ಟಿದ್ದರು.</p>.<p>‘ಸೋಮವಾರ ರಾತ್ರಿ 7.30ರ ಹೊತ್ತಿನಲ್ಲಿ ಕೋಟೆಯ ನೀರಿನ ಟ್ಯಾಂಕ್ ಪ್ರದೇಶದಲ್ಲಿ ಧ್ರುವರಾಜ್ ಅರಸ್ ಮತ್ತು ಪ್ರಮೋದ್ಗೆ ಗಲಾಟೆಯಾಯಿತು. ಸಾಲ ಕೊಡಿಸಿರುವ ₹ 20 ಸಾವಿರವನ್ನು ವಾಪಸ್ ಕೊಡುವಂತೆ ಪ್ರಮೋದ್ ದಬಾಯಿಸಿದರು.</p>.<p>ಸಾಲ ವಾಪಸ್ ನೀಡಲು ಎರಡು ದಿನ ಕಾಲಾವಕಾಶ ಬೇಕು ಎಂದು ನಿಮ್ಮ ಅಣ್ಣನಿಗೆ ನಿನ್ನೆಯೇ (ಏ.3) ಹೇಳಿದ್ದೇನೆ ಎಂದು ಧ್ರುವರಾಜ್ ಅರಸ್ ಆತನಿಗೆ ಹೇಳಿದರು. ಅಷ್ಟರಲ್ಲಿ ಅಲ್ಲಿಗೆ ದ್ವಿಚಕ್ರವಾಹನದಲ್ಲಿ ಇಬ್ಬರು ಬಂದರು. ಆ ವಾಹನದಲ್ಲಿದ್ದ ಒಬ್ಬನಿಂದ ಪ್ರಮೋದ್ ಚೂರಿ ತೆಗೆದುಕೊಂಡು ಧ್ರುವರಾಜ್ನ ಎಡಪಕ್ಕೆಗೆ ಚುಚ್ಚಿದರು. ನಂತರ, ಮೂವರು ದ್ವಿಚಕ್ರವಾಹನದಲ್ಲಿ ಪರಾರಿಯಾದರು. ಧ್ರುವರಾಜ್ ಅವರನ್ನು ಆಸ್ಪತ್ರೆಗೆ ಒಯ್ದೆವು, ಅಲ್ಲಿ ಅವರು ಮೃತಪಟ್ಟರು’ ಎಂದು ದೂರಿನಲ್ಲಿ ದೂರುದಾರ ತಿಳಿಸಿದ್ದಾರೆ.</p>.<p>ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಐಪಿಸಿ 302 (ಕೊಲೆ), 34 (ಅಪರಾಧ ಸಂಚು), 504 (ಶಾಂತಿಭಂಗ), 506 (ಬೆದರಿಕೆ) ಪ್ರಕರಣ ದಾಖಲಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>