ಸಾಲ ವಾಪಸ್ ನೀಡಲು ಎರಡು ದಿನ ಕಾಲಾವಕಾಶ ಬೇಕು ಎಂದು ನಿಮ್ಮ ಅಣ್ಣನಿಗೆ ನಿನ್ನೆಯೇ (ಏ.3) ಹೇಳಿದ್ದೇನೆ ಎಂದು ಧ್ರುವರಾಜ್ ಅರಸ್ ಆತನಿಗೆ ಹೇಳಿದರು. ಅಷ್ಟರಲ್ಲಿ ಅಲ್ಲಿಗೆ ದ್ವಿಚಕ್ರವಾಹನದಲ್ಲಿ ಇಬ್ಬರು ಬಂದರು. ಆ ವಾಹನದಲ್ಲಿದ್ದ ಒಬ್ಬನಿಂದ ಪ್ರಮೋದ್ ಚೂರಿ ತೆಗೆದುಕೊಂಡು ಧ್ರುವರಾಜ್ನ ಎಡಪಕ್ಕೆಗೆ ಚುಚ್ಚಿದರು. ನಂತರ, ಮೂವರು ದ್ವಿಚಕ್ರವಾಹನದಲ್ಲಿ ಪರಾರಿಯಾದರು. ಧ್ರುವರಾಜ್ ಅವರನ್ನು ಆಸ್ಪತ್ರೆಗೆ ಒಯ್ದೆವು, ಅಲ್ಲಿ ಅವರು ಮೃತಪಟ್ಟರು’ ಎಂದು ದೂರಿನಲ್ಲಿ ದೂರುದಾರ ತಿಳಿಸಿದ್ದಾರೆ.