ಎನ್.ಆರ್.ಪುರ (ಚಿಕ್ಕಮಗಳೂರು ಜಿಲ್ಲೆ): ಭದ್ರಾ ಹುಲಿ ಯೋಜನೆ ಬಫರ್ ಜೋನ್, ಪರಿಸರ ಸೂಕ್ಷ್ಮ ವಲಯ, ಕಸ್ತೂರಿ ರಂಗನ್ ವರದಿ, ಮೀಸಲು ಅರಣ್ಯ ಪ್ರಸ್ತಾವ ವಿರೋಧಿಸಿ ಮಲೆನಾಡು ರೈತರ ಹಿತರಕ್ಷಣಾ ಸಮಿತಿ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಎನ್.ಆರ್. ಪುರ ತಾಲ್ಲೂಕು ಬಂದ್ ನಡೆಯುತ್ತಿದೆ.
ಎನ್.ಆರ್. ಪುರದಲ್ಲಿ ಅಂಗಡಿ, ಮಳಿಗೆಗಳು ಮುಚ್ಚಿವೆ. ವಾಹನ ಸಂಚಾರ ಇಲ್ಲ. ಪ್ರತಿಭಟನಾ ಜಾಥಾ, ಸಭೆ ನಡೆಸಲು ಪ್ರತಿಭಟನಾಕಾರರು ಮುಂದಾಗಿದ್ದಾರೆ.