ವಾರ್ಡ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಹಕ್ಕುಪತ್ರ, ವಸತಿ ಸಮಸ್ಯೆಗಳೂ ಬಗೆಹರಿದಿಲ್ಲ. ಕಂಬದ ಬೀದಿ, ಬಿಳಿಮಗ್ಗದ ಬೀದಿಯ ರಸ್ತೆಗಳಿಗೆ ನಾಮಫಲಕಗಳೂ ಇಲ್ಲ. ವಾರ್ಡ್ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಪರಿಶಿಷ್ಟ ಸಮುದಾಯದ ಕುಟುಂಬಗಳಿದ್ದು, ಅವರಿಗೆ ವಸತಿ ಸೌಲಭ್ಯಗಳಿಲ್ಲ. ದೇವಾಲಯ ಆವರಣದಲ್ಲಿರುವ ಈ ಕುಟುಂಬಗಳಿಗೆ ಸೂರಿನ ಭಾಗ್ಯ ಲಭಿಸಿಲ್ಲ. ತಾತ್ಕಾಲಿಕ ಶೆಡ್ನಲ್ಲಿ ವಾಸಿಸುತ್ತಿದ್ದಾರೆ.