ಪಡಿತರ ಪಡೆಯಲು ಒಂದೇ ದಿನ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಬರಲು ಕಾರಣವೇನು ಎಂದು ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿ ಅನಿಲ್ ಕುಮಾರ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಈ ನ್ಯಾಯ ಬೆಲೆಯ ಅಂಗಡಿಗೆ ಸಿಂಸೆ, ಕೈಮರ, ಹೊಸಕರೆ, ನಾಗಲಾಪುರ ಗ್ರಾಮದ ಸುಮಾರು 1,400 ಪಡಿತರ ಚೀಟಿದಾರರು ಬರುತ್ತಾರೆ. ಏಪ್ರಿಲ್ ತಿಂಗಳ ಪಡಿತರ 14ನೇ ತಾರೀಕಿನ ನಂತರ ವಿತರಣೆಗೆ ಲಭ್ಯವಾಗಿದೆ. ಸೀಮೆಎಣ್ಣೆ ಈ ತಿಂಗಲ 24ಕ್ಕೆ ಬಂದಿದೆ. ಹಾಗಾಗಿ ಪಡಿತರ ಮತ್ತು ಸೀಮೆಎಣ್ಣೆಯನ್ನು ಏಕಕಾಲದಲ್ಲಿ ಪಡೆಯಲು ಪಡಿತರದಾರರು ಬಂದಿದ್ದರಿಂದ ಜನದಟ್ಟಣೆ ಆಯಿತು’ ಎಂದರು. ಲಾಕ್ಡೌನ್ ಆದರೂ ಸಹ ಪಡಿತರ ವಿತರಣೆಗೆ ಅಡ್ಡಿಯಿಲ್ಲ. ತಪ್ಪು ತಿಳಿವಳಿಕೆಯಿಂದ ಲಾಕ್ಡೌನ್ ಆಗುತ್ತದೆ ಪಡಿತರ ಸಿಗುವುದಿಲ್ಲ ಎಂಬ ಕಾರಣಕ್ಕೆ ಒಮ್ಮೆಲೇ ಪಡಿತರ ಪಡೆಯಲು ಬಂದಿದ್ದರು’ ಎಂದು ತಿಳಿಸಿದರು.