<p><strong>ನರಸಿಂಹರಾಜಪುರ:</strong> ‘ಪಿಎಂಶ್ರೀ ಯೋಜನೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ’ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ನ ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಥಮಿಕ ವಿಭಾಗದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಮಕ್ಕಳಗೆ ಕರಾಟೆ ಕಲಿಕೆಗಾಗಿ ಸರ್ಕಾರ ನೀಡಿರುವ ಯೋಗ ಮ್ಯಾಟ್ ವಿತರಿಸಿ’ ಅವರು ಮಾತನಾಡಿದರು.</p>.<p>ಮಕ್ಕಳು ಪಠ್ಯದ ಜತೆಗೆ ಕಲೆ, ಸಂಗೀತ, ಕ್ರೀಡೆ, ವ್ಯವಹಾರಿಕ ಜ್ಞಾನ, ಪ್ರವಾಸ, ವೃತ್ತಿಪರ ಜೀವನ, ಕೌಶಲ, ವ್ಯಕ್ತಿತ್ವ ವಿಕಸನ, ಇಂಗ್ಲಿಷ್ ಸಂವಹನ ಮತ್ತಿತರ ವಿಷಯ ಕಲಿಸುವುದಕ್ಕೆ ನುರಿತ ಶಿಕ್ಷಕರನ್ನು ಸರ್ಕಾರ ನೇಮಿಸಿದೆ. ಇದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದು, ಈಗಾಗಲೇ ಶಿಕ್ಷಕರು ಈ ಯೋಜನೆಯ ಉಪಯೋಗವನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಂಡಿದ್ದೇವೆ ಎಂದರು.</p>.<p>ಭೂದಾನಿಗಳಾದ ಎಚ್.ಎನ್. ರವಿಶಂಕರ್ ಮಾತನಾಡಿ, ‘ಸದರಿ ಶಾಲೆಗೆ ಸೇರಿದ 6 ಎಕರೆ ಜಾಗವನ್ನು ಬಿಡಿಸಿಕೊಳ್ಳುವಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಇನ್ನೂ ಸ್ವಲ್ಪ ಜಾಗವನ್ನು ಶೀಘ್ರ ಬಿಡಿಸಿಕೊಂಡು ಶಾಲೆಗೆ ಆದಾಯ ತರುವ ಕೆಲಸ ಮಾಡಲಾಗುವುದು. ಒತ್ತುವರಿಯಾಗಿದ್ದ ಶಾಲೆಯ ಜಾಗವನ್ನು ಬಿಡಿಸಿ ಕೊಂಡಿರುವುದರಿಂದ ನಮ್ಮ ಶಾಲೆಗೆ ಸಾಕಷ್ಟು ಆದಾಯ ಬರುವಂತಾಗಿದೆ’ ಎಂದರು.</p>.<p>ಎಸ್ಡಿಎಂಸಿ ಸದಸ್ಯರಾದ ಅಬೂಬಕರ್, ಪುರುಷೋತ್ತಮ, ಸೈಯದ್ ಸಿಗ್ಬತ್ ತುಲ್ಲಾ, ಅಭಿನವಗಿರಿರಾಜ್, ಕೀರ್ತಿ ಶೆಟ್ಟಿ, ಮುಖ್ಯ ಶಿಕ್ಷಕ ನಂಜುಂಡಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹರಾಜಪುರ:</strong> ‘ಪಿಎಂಶ್ರೀ ಯೋಜನೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ’ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ನ ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಥಮಿಕ ವಿಭಾಗದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಮಕ್ಕಳಗೆ ಕರಾಟೆ ಕಲಿಕೆಗಾಗಿ ಸರ್ಕಾರ ನೀಡಿರುವ ಯೋಗ ಮ್ಯಾಟ್ ವಿತರಿಸಿ’ ಅವರು ಮಾತನಾಡಿದರು.</p>.<p>ಮಕ್ಕಳು ಪಠ್ಯದ ಜತೆಗೆ ಕಲೆ, ಸಂಗೀತ, ಕ್ರೀಡೆ, ವ್ಯವಹಾರಿಕ ಜ್ಞಾನ, ಪ್ರವಾಸ, ವೃತ್ತಿಪರ ಜೀವನ, ಕೌಶಲ, ವ್ಯಕ್ತಿತ್ವ ವಿಕಸನ, ಇಂಗ್ಲಿಷ್ ಸಂವಹನ ಮತ್ತಿತರ ವಿಷಯ ಕಲಿಸುವುದಕ್ಕೆ ನುರಿತ ಶಿಕ್ಷಕರನ್ನು ಸರ್ಕಾರ ನೇಮಿಸಿದೆ. ಇದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದು, ಈಗಾಗಲೇ ಶಿಕ್ಷಕರು ಈ ಯೋಜನೆಯ ಉಪಯೋಗವನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಂಡಿದ್ದೇವೆ ಎಂದರು.</p>.<p>ಭೂದಾನಿಗಳಾದ ಎಚ್.ಎನ್. ರವಿಶಂಕರ್ ಮಾತನಾಡಿ, ‘ಸದರಿ ಶಾಲೆಗೆ ಸೇರಿದ 6 ಎಕರೆ ಜಾಗವನ್ನು ಬಿಡಿಸಿಕೊಳ್ಳುವಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಇನ್ನೂ ಸ್ವಲ್ಪ ಜಾಗವನ್ನು ಶೀಘ್ರ ಬಿಡಿಸಿಕೊಂಡು ಶಾಲೆಗೆ ಆದಾಯ ತರುವ ಕೆಲಸ ಮಾಡಲಾಗುವುದು. ಒತ್ತುವರಿಯಾಗಿದ್ದ ಶಾಲೆಯ ಜಾಗವನ್ನು ಬಿಡಿಸಿ ಕೊಂಡಿರುವುದರಿಂದ ನಮ್ಮ ಶಾಲೆಗೆ ಸಾಕಷ್ಟು ಆದಾಯ ಬರುವಂತಾಗಿದೆ’ ಎಂದರು.</p>.<p>ಎಸ್ಡಿಎಂಸಿ ಸದಸ್ಯರಾದ ಅಬೂಬಕರ್, ಪುರುಷೋತ್ತಮ, ಸೈಯದ್ ಸಿಗ್ಬತ್ ತುಲ್ಲಾ, ಅಭಿನವಗಿರಿರಾಜ್, ಕೀರ್ತಿ ಶೆಟ್ಟಿ, ಮುಖ್ಯ ಶಿಕ್ಷಕ ನಂಜುಂಡಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>