<p><strong>ಚಿಕ್ಕಮಗಳೂರು:</strong>ತಾಲ್ಲೂಕಿನ ಬಿಂಡಿಗ ಮಲ್ಲೇನಹಳ್ಳಿಯ ಆದಿಶಕ್ತಿ ದೇವೀರಮ್ಮ ದರ್ಶನಕ್ಕೆ ರಾಜ್ಯವ ವಿವಿಧೆಡೆಗಳಿಂದ ಭಕ್ತರು ಆಪಾರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.ಇಂದು ಮುಂಜಾನೆ (ಅ.27) ಸಡಗರ ಸಂಭ್ರಮದೊಂದಿಗೆ ದೇವಿಯ ಪೂಜಾ ಕೈಂಕರ್ಯಗಳುಆರಂಭವಾಯಿತು.ನರಕ ಚತುರ್ದಶಿಯಂದು ಆರಂಭವಾಗುವ ದೀಪೋತ್ಸವ ಮೂರು ದಿನಗಳವರೆಗೆ(ಅ.30ರವರೆಗೆ) ನಡೆಯಲಿದೆ.</p>.<p>ದೇವೀರಮ್ಮ ದೇಗುಲ ಅಭಿವೃದ್ಧಿ ಸಮಿತಿಯು ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಚಂದ್ರದ್ರೋಣ ಪರ್ವತ ಶ್ರೇಣಿಯ ದೇವೀರಮ್ಮ ಬೆಟ್ಟದ ಮಂಟಪದಲ್ಲಿನಸುಕಿನಲ್ಲಿ ಅಭಿಷೇಕ ನೆರವೇರಿತು. ಮಧ್ಯಾಹ್ನದವರೆಗೆ ವಿವಿಧ ಪೂಜಾಕೈಂಕರ್ಯಗಳು ನಡೆದವು. ರಾತ್ರಿ 7 ಗಂಟೆಗೆ ದೀಪೋತ್ಸವ ಜರುಗಲಿದೆ.</p>.<p>ನಿನ್ನೆ ನಡುರಾತ್ರಿಯಿಂದಲೇ ಭಕ್ತರು ಬೆಟ್ಟ ಏರಲು ಆರಂಭಿಸಿದ್ದರು.ಬೆಟ್ಟದಲ್ಲಿ ವರ್ಷದಲ್ಲಿ ಒಮ್ಮೆ ದೀಪಾವಳಿಯಂದು ದೇವಿಗೆ ಪೂಜೆ ನೆರವೇರುವುದು ವಿಶೇಷ. ಭಕ್ತರು ಮಲ್ಲೇನಹಳ್ಳಿಗೆ ತಲುಪಲು ಅನುಕೂಲವಾಗುವಂತೆ ಚಿಕ್ಕಮಗಳೂರು, ತರೀಕೆರೆ, ಬೀರೂರು, ಕಡೂರು ಇತರೆಡೆಗಳಿಂದ ಕೆಎಸ್ಆರ್ಟಿಸಿ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.</p>.<p>ಬೆಟ್ಟದ ತಪ್ಪಲಿನಲ್ಲಿ (ಬಿಂಡಿಗ ಮಲ್ಲೇನಹಳ್ಳಿ) ದೇಗುಲದಲ್ಲಿ ಇದೇ 30ರವರೆಗೆ ಕೈಂಕರ್ಯಗಳು ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong>ತಾಲ್ಲೂಕಿನ ಬಿಂಡಿಗ ಮಲ್ಲೇನಹಳ್ಳಿಯ ಆದಿಶಕ್ತಿ ದೇವೀರಮ್ಮ ದರ್ಶನಕ್ಕೆ ರಾಜ್ಯವ ವಿವಿಧೆಡೆಗಳಿಂದ ಭಕ್ತರು ಆಪಾರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.ಇಂದು ಮುಂಜಾನೆ (ಅ.27) ಸಡಗರ ಸಂಭ್ರಮದೊಂದಿಗೆ ದೇವಿಯ ಪೂಜಾ ಕೈಂಕರ್ಯಗಳುಆರಂಭವಾಯಿತು.ನರಕ ಚತುರ್ದಶಿಯಂದು ಆರಂಭವಾಗುವ ದೀಪೋತ್ಸವ ಮೂರು ದಿನಗಳವರೆಗೆ(ಅ.30ರವರೆಗೆ) ನಡೆಯಲಿದೆ.</p>.<p>ದೇವೀರಮ್ಮ ದೇಗುಲ ಅಭಿವೃದ್ಧಿ ಸಮಿತಿಯು ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಚಂದ್ರದ್ರೋಣ ಪರ್ವತ ಶ್ರೇಣಿಯ ದೇವೀರಮ್ಮ ಬೆಟ್ಟದ ಮಂಟಪದಲ್ಲಿನಸುಕಿನಲ್ಲಿ ಅಭಿಷೇಕ ನೆರವೇರಿತು. ಮಧ್ಯಾಹ್ನದವರೆಗೆ ವಿವಿಧ ಪೂಜಾಕೈಂಕರ್ಯಗಳು ನಡೆದವು. ರಾತ್ರಿ 7 ಗಂಟೆಗೆ ದೀಪೋತ್ಸವ ಜರುಗಲಿದೆ.</p>.<p>ನಿನ್ನೆ ನಡುರಾತ್ರಿಯಿಂದಲೇ ಭಕ್ತರು ಬೆಟ್ಟ ಏರಲು ಆರಂಭಿಸಿದ್ದರು.ಬೆಟ್ಟದಲ್ಲಿ ವರ್ಷದಲ್ಲಿ ಒಮ್ಮೆ ದೀಪಾವಳಿಯಂದು ದೇವಿಗೆ ಪೂಜೆ ನೆರವೇರುವುದು ವಿಶೇಷ. ಭಕ್ತರು ಮಲ್ಲೇನಹಳ್ಳಿಗೆ ತಲುಪಲು ಅನುಕೂಲವಾಗುವಂತೆ ಚಿಕ್ಕಮಗಳೂರು, ತರೀಕೆರೆ, ಬೀರೂರು, ಕಡೂರು ಇತರೆಡೆಗಳಿಂದ ಕೆಎಸ್ಆರ್ಟಿಸಿ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.</p>.<p>ಬೆಟ್ಟದ ತಪ್ಪಲಿನಲ್ಲಿ (ಬಿಂಡಿಗ ಮಲ್ಲೇನಹಳ್ಳಿ) ದೇಗುಲದಲ್ಲಿ ಇದೇ 30ರವರೆಗೆ ಕೈಂಕರ್ಯಗಳು ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>