<p><strong>ಚಿಕ್ಕಮಗಳೂರು</strong>: ಕಳಪೆ ಬಿತ್ತನೆ ಬೀಜ ವಿತರಿಸಿದ್ದರಿಂದ ಬಿತ್ತನೆ ಮಾಡಿದ್ದ ಶೇಂಗಾ ಮೊಳಕೆಯೊಡೆಯದೆ ಹಾಳಾಗಿದೆ ಎಂದು ಆರೋಪಿಸಿ ತಾಲ್ಲೂಕಿನ ಲಕ್ಯಾ ರೈತ ಸಂಪರ್ಕ ಕೇಂದ್ರದ ಬಾಗಿಲು ಮುಚ್ಚಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತರು ಹೊಲ ಹದಗೊಳಿಸಿ ಶೇಂಗಾ ಬಿತ್ತನೆಗೆ ಕಾದಿದ್ದರು. ರೈತ ಸಂಪರ್ಕ ಕೇಂದ್ರಕ್ಕೆ ಮೊದಲಿಗೆ ಬಂದ ಬಿತ್ತನೆ ಬೀಜ ಪಡೆದು ಬಿತ್ತನೆಯನ್ನೂ ಮಾಡಿದ್ದರು. ತಿಂಗಳಾದರೂ ಮೊಳಕೆಯೊಡೆಯದೆ ಇದ್ದಾಗ ರೈತರು ಕಂಗಾಲಾದರು.</p>.<p>ರೈತ ಸಂಪರ್ಕ ಕೇಂದ್ರಕ್ಕೆ ಮೊದಲ ದಿನ ಬಂದಿದ್ದ ಶೇಂಗಾ ಬಿತ್ತನೆ ಬೀಜ ಪಡೆದಿದ್ದ ಬಹುತೇಕ ರೈತರ ಸ್ಥಿತಿ ಇದೆ ಆಗಿದೆ ಎಂಬುದು ತಿಳಿದು ಬಳಿಕ ಪ್ರತಿಭಟನೆಗೆ ರೈತರು ಮುಂದಾದರು.</p>.<p>ಹೊಲ ಹಸನು ಮಾಡಿ ಹದವಾದ ಹಂಗಾಮಿನಲ್ಲಿ ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಬೀಜ, ರಸಗೊಬ್ಬರ, ಕಾರ್ಮಿಕರ ಕೂಲಿ ಸೇರಿ ಎಕರೆಗೆ ಕನಿಷ್ಠ ₹10 ಸಾವಿರ ಖರ್ಚಾಗಿದೆ. ಈಗ ಮತ್ತೊಮ್ಮೆ ಬಿತ್ತನೆ ಮಾಡಿದರೂ ವಾತಾವರಣ ಬದಲಾಗಿರುವುದರಿಂದ ಶೇಂಗಾ ಬೆಳೆ ಬರುವುದಿಲ್ಲ. ಕಳಪೆ ಬಿತ್ತನೆ ಬೀಜ ಪೂರೈಸಿದ್ದರಿಂದ ರೈತರು ತೊಂದರೆ ಅನುಭವಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಬಿತ್ತನೆ ಬೀಜದ ಹಣವನ್ನಾದರೂ ವಾಪಸ್ ಕೊಡಿಸಬೇಕು. ಅಲ್ಲಿಯ ತನಕ ರೈತ ಸಂಪರ್ಕ ಕೇಂದ್ರ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಸೋಮವಾರ ಬಾಗಿಲು ಮುಚ್ಚಿಸಿದರು.</p>.<div><blockquote>ಬಿತ್ತನೆ ಮಾಡಿದ್ದ ಶೇಂಗಾ ಯಾವ ಕಾರಣಕ್ಕೆ ಮೊಳಕೆಯೊಡೆದಿಲ್ಲ ಎಂಬುದು ಗೊತ್ತಿಲ್ಲ. ಬಿತ್ತನೆ ಬೀಜದ ಹಣ ವಾಪಸ್ ಕೊಡಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದರಿಂದ ನಿಗಮದಿಂದ ವಾಪಸ್ ಕೊಟ್ಟಿದ್ದಾರೆ. </blockquote><span class="attribution">–ಸುಜಾತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ</span></div>.<p>ಸ್ಥಳಕ್ಕೆ ಬಂದ ಕೃಷಿ ಇಲಾಖೆ ಅಧಿಕಾರಿಗಳು, ʼರಾಷ್ಟ್ರೀಯ ಬೀಜ ನಿಗಮದ ಮೂಲಕವೇ ಶೇಂಗಾ ಬಿತ್ತನೆ ಬೀಜ ತರಿಸಿ ರೈತರಿಗೆ ವಿತರಣೆ ಮಾಡಿಸಲಾಗಿದೆ. ಕಳಪೆ ಬಿತ್ತನೆ ಬೀಜ ಎಂದು ಆರೋಪಿಸುತ್ತಿರುವುದರಿಂದ ರೈತರಿಗೆ ಹಣ ವಾಪಸ್ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆʼ ಎಂದರು. </p>.<p>ರೈತರ ಪ್ರತಿಭಟನೆಗೆ ಮಣಿದ ಅಧಿಕಾರಿಗಳು, 27 ರೈತರು ಬಿತ್ತನೆ ಬೀಜ ಖರೀದಿಸಿದ್ದ ಮೊತ್ತ ₹1,68,720 ವಾಪಸ್ ಕೊಡಿಸಿದರು. ಬಳಿಕ ರೈತ ಸಂಪರ್ಕ ಕೇಂದ್ರದ ಬೀಗ ತೆರೆಯಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಕಳಪೆ ಬಿತ್ತನೆ ಬೀಜ ವಿತರಿಸಿದ್ದರಿಂದ ಬಿತ್ತನೆ ಮಾಡಿದ್ದ ಶೇಂಗಾ ಮೊಳಕೆಯೊಡೆಯದೆ ಹಾಳಾಗಿದೆ ಎಂದು ಆರೋಪಿಸಿ ತಾಲ್ಲೂಕಿನ ಲಕ್ಯಾ ರೈತ ಸಂಪರ್ಕ ಕೇಂದ್ರದ ಬಾಗಿಲು ಮುಚ್ಚಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತರು ಹೊಲ ಹದಗೊಳಿಸಿ ಶೇಂಗಾ ಬಿತ್ತನೆಗೆ ಕಾದಿದ್ದರು. ರೈತ ಸಂಪರ್ಕ ಕೇಂದ್ರಕ್ಕೆ ಮೊದಲಿಗೆ ಬಂದ ಬಿತ್ತನೆ ಬೀಜ ಪಡೆದು ಬಿತ್ತನೆಯನ್ನೂ ಮಾಡಿದ್ದರು. ತಿಂಗಳಾದರೂ ಮೊಳಕೆಯೊಡೆಯದೆ ಇದ್ದಾಗ ರೈತರು ಕಂಗಾಲಾದರು.</p>.<p>ರೈತ ಸಂಪರ್ಕ ಕೇಂದ್ರಕ್ಕೆ ಮೊದಲ ದಿನ ಬಂದಿದ್ದ ಶೇಂಗಾ ಬಿತ್ತನೆ ಬೀಜ ಪಡೆದಿದ್ದ ಬಹುತೇಕ ರೈತರ ಸ್ಥಿತಿ ಇದೆ ಆಗಿದೆ ಎಂಬುದು ತಿಳಿದು ಬಳಿಕ ಪ್ರತಿಭಟನೆಗೆ ರೈತರು ಮುಂದಾದರು.</p>.<p>ಹೊಲ ಹಸನು ಮಾಡಿ ಹದವಾದ ಹಂಗಾಮಿನಲ್ಲಿ ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಬೀಜ, ರಸಗೊಬ್ಬರ, ಕಾರ್ಮಿಕರ ಕೂಲಿ ಸೇರಿ ಎಕರೆಗೆ ಕನಿಷ್ಠ ₹10 ಸಾವಿರ ಖರ್ಚಾಗಿದೆ. ಈಗ ಮತ್ತೊಮ್ಮೆ ಬಿತ್ತನೆ ಮಾಡಿದರೂ ವಾತಾವರಣ ಬದಲಾಗಿರುವುದರಿಂದ ಶೇಂಗಾ ಬೆಳೆ ಬರುವುದಿಲ್ಲ. ಕಳಪೆ ಬಿತ್ತನೆ ಬೀಜ ಪೂರೈಸಿದ್ದರಿಂದ ರೈತರು ತೊಂದರೆ ಅನುಭವಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಬಿತ್ತನೆ ಬೀಜದ ಹಣವನ್ನಾದರೂ ವಾಪಸ್ ಕೊಡಿಸಬೇಕು. ಅಲ್ಲಿಯ ತನಕ ರೈತ ಸಂಪರ್ಕ ಕೇಂದ್ರ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಸೋಮವಾರ ಬಾಗಿಲು ಮುಚ್ಚಿಸಿದರು.</p>.<div><blockquote>ಬಿತ್ತನೆ ಮಾಡಿದ್ದ ಶೇಂಗಾ ಯಾವ ಕಾರಣಕ್ಕೆ ಮೊಳಕೆಯೊಡೆದಿಲ್ಲ ಎಂಬುದು ಗೊತ್ತಿಲ್ಲ. ಬಿತ್ತನೆ ಬೀಜದ ಹಣ ವಾಪಸ್ ಕೊಡಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದರಿಂದ ನಿಗಮದಿಂದ ವಾಪಸ್ ಕೊಟ್ಟಿದ್ದಾರೆ. </blockquote><span class="attribution">–ಸುಜಾತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ</span></div>.<p>ಸ್ಥಳಕ್ಕೆ ಬಂದ ಕೃಷಿ ಇಲಾಖೆ ಅಧಿಕಾರಿಗಳು, ʼರಾಷ್ಟ್ರೀಯ ಬೀಜ ನಿಗಮದ ಮೂಲಕವೇ ಶೇಂಗಾ ಬಿತ್ತನೆ ಬೀಜ ತರಿಸಿ ರೈತರಿಗೆ ವಿತರಣೆ ಮಾಡಿಸಲಾಗಿದೆ. ಕಳಪೆ ಬಿತ್ತನೆ ಬೀಜ ಎಂದು ಆರೋಪಿಸುತ್ತಿರುವುದರಿಂದ ರೈತರಿಗೆ ಹಣ ವಾಪಸ್ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆʼ ಎಂದರು. </p>.<p>ರೈತರ ಪ್ರತಿಭಟನೆಗೆ ಮಣಿದ ಅಧಿಕಾರಿಗಳು, 27 ರೈತರು ಬಿತ್ತನೆ ಬೀಜ ಖರೀದಿಸಿದ್ದ ಮೊತ್ತ ₹1,68,720 ವಾಪಸ್ ಕೊಡಿಸಿದರು. ಬಳಿಕ ರೈತ ಸಂಪರ್ಕ ಕೇಂದ್ರದ ಬೀಗ ತೆರೆಯಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>