ಸ್ನೇಹ ಶಾಲೆಯ ವಿದ್ಯಾರ್ಥಿಗಳು ಸಂಚಾರಿ ವಿಜಯ್ ಸ್ಮರಣಾರ್ಥ ನ್ಯಾಯಕ್ಕೆ ಜಯ ಎಂಬ ನಾಟಕ ಅಭಿನಯಿಸಿದರು. ಪಂಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೇಖಾ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಮುಖ್ಯ ಶಿಕ್ಷಕ ಟಿ.ಬಿ.ಪ್ರಸನ್ನ, ಕೆ.ಲೋಕೇಶ್ ಇದ್ದರು.