‘ಈ ಸಲದ ಮಳೆ ವಾಡಿಕೆಗಿಂತ ದುಪ್ಪಟ್ಟಾಯಿತು. ಆರಂಭದಲ್ಲಿಯೇ ಹೆಚ್ಚಾದ ಮಳೆ, ಈರುಳ್ಳಿ ಬೆಳವಣಿಗೆಯನ್ನು ಕುಂಠಿತಗೊಳಿಸಿತು. ಬಳಿಕ ಗಡ್ಡೆ ಹಿಗ್ಗದಂತೆ ಮಾಡಿತು. ಕಡೆಗೆ ಬಂದ ಅಲ್ಪ-ಸ್ವಲ್ಪ ಈರುಳ್ಳಿಯನ್ನು ಹೊಲದಿಂದ ಹೊರತೆಗೆಯಲು, ಸ್ವಚ್ಛಗೊಳಿಸಲು, ಮಾರುಕಟ್ಟೆಗೆ ಕೊಂಡೊಯ್ಯಲು ಅಡ್ಡಿ ಮಾಡಿತು. ಇಂದಿಗೂ ಬೆಳೆದ ಈರುಳ್ಳಿಯನ್ನು ಹೊಲದಲ್ಲಿಯೇ ಬಿಟ್ಟಿದ್ದೇವೆ‘ ಎಂದು ಕೃಷಿಕ ಬಸವರಾಜಪ್ಪ ಬೇಸರ ವ್ಯಕ್ತಪಡಿಸಿದರು.