ಕಡೂರು: ತಾಲ್ಲೂಕಿನಲ್ಲಿ ಭಾನುವಾರ ಬಿರುಸಿನ ಮಳೆಯಾಗಿದೆ. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಬಿಡುವು ನೀಡದೆ ಸುರಿಯಿತು.
ಪಟ್ಟಣದಲ್ಲಿ ರಸ್ತೆಗಳ ಮೇಲೆ ಒಂದು ಅಡಿಗೂ ಹೆಚ್ಚು ನೀರು ಹರಿಯಿತು. ದಿಢೀರನೆ ಸುರಿಯಲಾರಂಭಿಸಿದ ಮಳೆಗೆ ಜನರು ಕಕ್ಕಾಬಿಕ್ಕಿಯಾಗಿ ಅಂಗಡಿ ಮುಂಗಟ್ಟುಗಳ ಮುಂದೆ ಅಶ್ರಯ ಪಡೆದರು.
ಮಳೆ ನೀರು ನೆಲ ಅಂತಸ್ತುಗಳಲ್ಲಿದ್ದ ಅಂಗಡಿಗಳಿಗೂ ನುಗ್ಗಿತು. ಬಸವೇಶ್ವರ ವೃತ್ತದಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಕಟ್ಟಡದ ಕೆಳಭಾಗದಲ್ಲಿರುವ ಮಂಗಲ್ ದೀಪ್ ಬಟ್ಟೆ ಅಂಗಡಿಗೆ ನೀರು ನುಗ್ಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಮಳೆಯಾಗಿದೆ.