<p><strong>ಚಿಕ್ಕಮಗಳೂರು</strong>: ‘ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ ಈ ರಾಷ್ಟ್ರದಲ್ಲಿ ಆಳ್ವಿಕೆ ನಡೆಸಲು ಆಗಲ್ಲ’ ಎಂದುಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.</p>.<p>ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಎಐಟಿ ವೃತ್ತದ ಒಕ್ಕಲಿಗರ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.</p>.<p>‘ಹಿಂದೂಸ್ತಾನದಲ್ಲಿ ಬಿಜೆಪಿ ಹೊರತಾಗಿ ಎಲ್ಲ ಕಡೆ ಪ್ರಾದೇಶಿಕ ಪಕ್ಷಗಳು ಮುಂಚೂಣಿಯಲ್ಲಿವೆ. ಜೆಡಿಎಸ್ ಪಕ್ಷವನ್ನು ಉಳಿಸಬೇಕು ಎಂಬ ಆಸೆ ಇದೆ. ಪಕ್ಷವನ್ನು ಸದೃಢಗೊಳಿಸಲು ಶ್ರಮಿಸುತ್ತೇನೆ’ ಎಂದು ಹೇಳಿದರು.</p>.<p>‘ಬೆಂಗಳೂರಿನಲ್ಲಿ ಇದೇ 13ರಂದು ಜನತಾ ಜಲಧಾರೆ ಕಾರ್ಯಕ್ರಮ ಇದೆ. ಅದು ಮುಗಿದ ನಂತರ, ಎಲ್ಲ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಈ ಜಿಲ್ಲೆಯಲ್ಲೂ ಒಂದು ಇಡೀ ದಿನ ಸಭೆ ನಡೆಸುತ್ತೇನೆ’ ಎಂದು ಹೇಳಿದರು.</p>.<p>‘ರಾಜಕಾರಣದಲ್ಲಿ ಸುದೀರ್ಘವಾಗಿ ದುಡಿದಿದ್ದೇನೆ. ಪಕ್ಷಾಂತರ ಎಂದೂ ಮಾಡಿಲ್ಲ. ಪಕ್ಷ ಸದೃಢಗೊಳಿಸುವ ಶಕ್ತಿ ಇದೆ. ಪಕ್ಷದಲ್ಲಿ ಎಲ್ಲರಿಗಿಂತ ಕಾರ್ಯ ಕರ್ತರು ಮುಖ್ಯ. ಪಕ್ಷ ಬಲಪಡಿಸಲು ನಿಮ್ಮೆಲ್ಲರ ಸಹಕಾರ ಬೇಕು’ ಎಂದು ಕೋರಿದರು.</p>.<p>‘ಒಂದೊಮ್ಮೆ ಈ ಜಿಲ್ಲೆಯಲ್ಲಿ ಜೆಡಿಎಸ್ನ ನಾಲ್ವರು ಶಾಸಕರು ಇದ್ದರು. ಆ ದಿನಗಳು ಮತ್ತೆ ಮರುಕಳಿಸುವಂತೆ ಮಾಡಲು ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>‘ದೇಶ, ರಾಜ್ಯದಲ್ಲಿ ನಡೆಯುತ್ತಿ ರುವ ವಿದ್ಯಮಾನಗಳು ಗೊತ್ತು. ಎರಡು ರಾಷ್ಟ್ರೀಯ ಪಕ್ಷಗಳ ಚಟುವಟಿಕೆಗಳು ತಿಳಿದಿವೆ. ಕರ್ನಾಟಕದಲ್ಲಿ ದರಿದ್ರ ಸರ್ಕಾರ ಇದೆ ಎಂದು ಹಲವರು ಹೀಗಳೆಯುವುದನ್ನು ಕೇಳಿದ್ದೇನೆ. ಈ ಸರ್ಕಾರವನ್ನು ತಂದವರು ಯಾರು, ಅದಕ್ಕೆ ಕೈಜೋಡಿಸಿದ 16 ಶಾಸಕರು ಯಾರು, ಅವರನ್ನು ಕಳಿಸಿಕೊಟ್ಟವರು ಯಾರು ಎಂಬದನ್ನು ಪ್ರಶ್ನಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ದೇವೇಗೌಡ ಅವರು ಏನು ಮಾಡಿ ದ್ದಾರೆ ಎಂಬುದು ಜನರಿಗೆ ತಿಳಿದಿದೆ. ನಾನೊಬ್ಬ ರೈತನ ಮಗ ಬಡತನದ ಬೇಗೆ ಏನು ಎಂಬುದು ಗೊತ್ತಿದೆ. ಬದುಕಿನುದ್ದಕೂ ನೀರಾವರಿಗಾಗಿ ಮಾತ್ರ ಹೋರಾಟ ಮಾಡಿಲ್ಲ. ಎಲ್ಲ ಕ್ಷೇತ್ರಗಳು, ಸಮುದಾಯಗಳ ಏಳಿಗೆಗೆ ಹೋರಾಟ ಮಾಡಿದ್ದೇನೆ ಎಂದರು.</p>.<p>ಎಚ್.ಡಿ. ಕುಮಾರಸ್ವಾಮಿ ಅವರು ಶ್ರಮಪಟ್ಟು ಜಲಧಾರೆ ಕಾರ್ಯಕ್ರಮ ಮಾಡಿದ್ದಾರೆ. ಅದನ್ನು ಯಶಸ್ವಿಗೊಳಿಸಲು ಪಕ್ಷದ ಎಲ್ಲರೂ ಶ್ರಮಿಸಬೇಕು ಎಂದರು.</p>.<p>ಮಾಜಿ ಶಾಸಕ ವೈಎಸ್ವಿ ದತ್ತ ಮಾತನಾಡಿ, ‘ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸ್ವರೂಪ ಭಿನ್ನವಾಗಿದೆ. ಮಲೆನಾಡು, ಬಯಲು ಸೀಮೆ ಇಲ್ಲಿವೆ. ಕ್ಷೇತ್ರಗಳ ‘ಫಿಸಿಕ್ಸ್’ ಮತ್ತು ‘ಕೆಮಿಸ್ಟ್ರಿ’ ಇದೆಲ್ಲದರ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಬೇಕು’ ಎಂದರು.</p>.<p>ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಚಂದ್ರಪ್ಪ, ತಿಮ್ಮಶೆಟ್ಟಿ, ಮಂಜಪ್ಪ, ಎಚ್.ಜಿ.ವೆಂಕಟೇಶ್, ಹೊಲದಗದ್ದೆ ಗಿರೀಶ್, ಸೋನಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ‘ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ ಈ ರಾಷ್ಟ್ರದಲ್ಲಿ ಆಳ್ವಿಕೆ ನಡೆಸಲು ಆಗಲ್ಲ’ ಎಂದುಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.</p>.<p>ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಎಐಟಿ ವೃತ್ತದ ಒಕ್ಕಲಿಗರ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.</p>.<p>‘ಹಿಂದೂಸ್ತಾನದಲ್ಲಿ ಬಿಜೆಪಿ ಹೊರತಾಗಿ ಎಲ್ಲ ಕಡೆ ಪ್ರಾದೇಶಿಕ ಪಕ್ಷಗಳು ಮುಂಚೂಣಿಯಲ್ಲಿವೆ. ಜೆಡಿಎಸ್ ಪಕ್ಷವನ್ನು ಉಳಿಸಬೇಕು ಎಂಬ ಆಸೆ ಇದೆ. ಪಕ್ಷವನ್ನು ಸದೃಢಗೊಳಿಸಲು ಶ್ರಮಿಸುತ್ತೇನೆ’ ಎಂದು ಹೇಳಿದರು.</p>.<p>‘ಬೆಂಗಳೂರಿನಲ್ಲಿ ಇದೇ 13ರಂದು ಜನತಾ ಜಲಧಾರೆ ಕಾರ್ಯಕ್ರಮ ಇದೆ. ಅದು ಮುಗಿದ ನಂತರ, ಎಲ್ಲ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಈ ಜಿಲ್ಲೆಯಲ್ಲೂ ಒಂದು ಇಡೀ ದಿನ ಸಭೆ ನಡೆಸುತ್ತೇನೆ’ ಎಂದು ಹೇಳಿದರು.</p>.<p>‘ರಾಜಕಾರಣದಲ್ಲಿ ಸುದೀರ್ಘವಾಗಿ ದುಡಿದಿದ್ದೇನೆ. ಪಕ್ಷಾಂತರ ಎಂದೂ ಮಾಡಿಲ್ಲ. ಪಕ್ಷ ಸದೃಢಗೊಳಿಸುವ ಶಕ್ತಿ ಇದೆ. ಪಕ್ಷದಲ್ಲಿ ಎಲ್ಲರಿಗಿಂತ ಕಾರ್ಯ ಕರ್ತರು ಮುಖ್ಯ. ಪಕ್ಷ ಬಲಪಡಿಸಲು ನಿಮ್ಮೆಲ್ಲರ ಸಹಕಾರ ಬೇಕು’ ಎಂದು ಕೋರಿದರು.</p>.<p>‘ಒಂದೊಮ್ಮೆ ಈ ಜಿಲ್ಲೆಯಲ್ಲಿ ಜೆಡಿಎಸ್ನ ನಾಲ್ವರು ಶಾಸಕರು ಇದ್ದರು. ಆ ದಿನಗಳು ಮತ್ತೆ ಮರುಕಳಿಸುವಂತೆ ಮಾಡಲು ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>‘ದೇಶ, ರಾಜ್ಯದಲ್ಲಿ ನಡೆಯುತ್ತಿ ರುವ ವಿದ್ಯಮಾನಗಳು ಗೊತ್ತು. ಎರಡು ರಾಷ್ಟ್ರೀಯ ಪಕ್ಷಗಳ ಚಟುವಟಿಕೆಗಳು ತಿಳಿದಿವೆ. ಕರ್ನಾಟಕದಲ್ಲಿ ದರಿದ್ರ ಸರ್ಕಾರ ಇದೆ ಎಂದು ಹಲವರು ಹೀಗಳೆಯುವುದನ್ನು ಕೇಳಿದ್ದೇನೆ. ಈ ಸರ್ಕಾರವನ್ನು ತಂದವರು ಯಾರು, ಅದಕ್ಕೆ ಕೈಜೋಡಿಸಿದ 16 ಶಾಸಕರು ಯಾರು, ಅವರನ್ನು ಕಳಿಸಿಕೊಟ್ಟವರು ಯಾರು ಎಂಬದನ್ನು ಪ್ರಶ್ನಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ದೇವೇಗೌಡ ಅವರು ಏನು ಮಾಡಿ ದ್ದಾರೆ ಎಂಬುದು ಜನರಿಗೆ ತಿಳಿದಿದೆ. ನಾನೊಬ್ಬ ರೈತನ ಮಗ ಬಡತನದ ಬೇಗೆ ಏನು ಎಂಬುದು ಗೊತ್ತಿದೆ. ಬದುಕಿನುದ್ದಕೂ ನೀರಾವರಿಗಾಗಿ ಮಾತ್ರ ಹೋರಾಟ ಮಾಡಿಲ್ಲ. ಎಲ್ಲ ಕ್ಷೇತ್ರಗಳು, ಸಮುದಾಯಗಳ ಏಳಿಗೆಗೆ ಹೋರಾಟ ಮಾಡಿದ್ದೇನೆ ಎಂದರು.</p>.<p>ಎಚ್.ಡಿ. ಕುಮಾರಸ್ವಾಮಿ ಅವರು ಶ್ರಮಪಟ್ಟು ಜಲಧಾರೆ ಕಾರ್ಯಕ್ರಮ ಮಾಡಿದ್ದಾರೆ. ಅದನ್ನು ಯಶಸ್ವಿಗೊಳಿಸಲು ಪಕ್ಷದ ಎಲ್ಲರೂ ಶ್ರಮಿಸಬೇಕು ಎಂದರು.</p>.<p>ಮಾಜಿ ಶಾಸಕ ವೈಎಸ್ವಿ ದತ್ತ ಮಾತನಾಡಿ, ‘ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸ್ವರೂಪ ಭಿನ್ನವಾಗಿದೆ. ಮಲೆನಾಡು, ಬಯಲು ಸೀಮೆ ಇಲ್ಲಿವೆ. ಕ್ಷೇತ್ರಗಳ ‘ಫಿಸಿಕ್ಸ್’ ಮತ್ತು ‘ಕೆಮಿಸ್ಟ್ರಿ’ ಇದೆಲ್ಲದರ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಬೇಕು’ ಎಂದರು.</p>.<p>ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಚಂದ್ರಪ್ಪ, ತಿಮ್ಮಶೆಟ್ಟಿ, ಮಂಜಪ್ಪ, ಎಚ್.ಜಿ.ವೆಂಕಟೇಶ್, ಹೊಲದಗದ್ದೆ ಗಿರೀಶ್, ಸೋನಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>