<p><strong>ಕಳಸ</strong>: ಮಲೆನಾಡನ್ನು ಕರಾವಳಿ ಜೊತೆಗೆ ಬೆಸೆಯುವ ಕಳಸ- ಕುದುರೆಮುಖ- ಎಸ್.ಕೆ. ಬಾರ್ಡರ್ ಹೆದ್ದಾರಿಯ ಹದಗೆಟ್ಟ ಸ್ಥಿತಿಯ ಬಗ್ಗೆ ಸ್ಥಳೀಯರಲ್ಲಿ ಆಕ್ರೋಶ ಹೆಚ್ಚುತ್ತಿದೆ.</p>.<p>3 ವರ್ಷಗಳಿಂದ ಈ ಹೆದ್ದಾರಿ ದುರಸ್ತಿ ಬಗ್ಗೆ ಕಳಸ, ಸಂಸೆ, ಜಾಂಬಳೆ, ನೆಲ್ಲಿಬೀಡು, ಕುದುರೆಮುಖ ಆಸುಪಾಸಿನ ಗ್ರಾಮಸ್ಥರು ಸತತವಾಗಿ ದನಿ ಎತ್ತುತ್ತಲೆ ಇದ್ದಾರೆ. ಅನೇಕ ಪ್ರತಿಭಟನೆಗಳು, ಘೆರಾವ್, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ ನಡೆದಿವೆ. ಆದರೆ ಈವರೆಗೂ ಈ ರಸ್ತೆ ದುರಸ್ತಿ ಆಗಿಲ್ಲ.</p>.<p>ಕಳೆದ ಮಳೆಗಾಲಕ್ಕೆ ಮುನ್ನ 8 ಕಿ.ಮೀ ರಸ್ತೆಯ ಡಾಂಬರೀಕರಣಕ್ಕೆ ಟೆಂಡರ್ ಕರೆದು, ಕೆಲಸ ಆರಂಭಗೊಂಡಿತ್ತು. ಆದರೆ, ಮಳೆಯ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಯಿತು. ಆಗಿನಿಂದಲೂ ಗುತ್ತಿಗೆದಾರರು ನಾಪತ್ತೆ ಆಗಿದ್ದಾರೆ. ಇಂಥವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.</p>.<div><blockquote>ಕಳೆದ ಬಾರಿ ಟೆಂಡರ್ ನಡೆದ ಕಾಮಗಾರಿಯ ಉಳಿದ ಭಾಗದ ಕೆಲಸ ಮುಂದಿನ ವಾರ ಆರಂಭವಾಗಲಿದೆ. ರಸ್ತೆಯ ಉಳಿದ ಭಾಗದ ಅಭಿವೃದ್ಧಿಗೂ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ </blockquote><span class="attribution">ಎಂಜಿನಿಯರ್ ಚನ್ನಬಸಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ಪಾಲಕ</span></div>.<p>ಸಂಸೆಯಿಂದ ಎಸ್.ಕೆ. ಬಾರ್ಡರ್ವರೆಗಿನ 34 ಕಿ.ಮೀ ರಸ್ತೆಯಲ್ಲಿ ಈಗಲೂ ವಾಹನ ಸಂಚಾರ ಅಸಾಧ್ಯ ಎಂಬಷ್ಟು ದೊಡ್ಡ ಗಾತ್ರದ ಗುಂಡಿಗಳು ಇವೆ. ಚರಂಡಿಗಳು ಮುಚ್ಚಿಕೊಂಡು ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ರಸ್ತೆ ಪಕ್ಕದ ಮರಗಳು, ಪೊದೆಗಳು ಹೆದ್ದಾರಿ ಆಕ್ರಮಿಸಿಕೊಳ್ಳುತ್ತಿವೆ. ಈ ಹೆದ್ದಾರಿಯನ್ನು ಪ್ರತಿನಿತ್ಯ ಬಳಸುವ ಸ್ಥಳೀಯರು ಮತ್ತು ಪ್ರವಾಸಿ ವಾಹನಗಳು ದುಃಸ್ಥಿತಿಗೆ ತಲುಪುತ್ತಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಜನರು ಹಿಡಿಶಾಪ ಹಾಕಿ ರಸ್ತೆ ಸವೆಸುವ ಸ್ಥಿತಿ ಇಲ್ಲಿದೆ.</p>.<p>ಕಳಸ ತಾಲ್ಲೂಕಿನಿಂದ ನಿತ್ಯ ಮಂಗಳೂರಿನ ಆಸ್ಪತ್ರೆಗಳಿಗೆ ನೂರಾರು ಜನರು ಮತ್ತು ಕಾಲೇಜು ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಮಂಗಳೂರಿನಿಂದ ಕಳಸ ತಾಲ್ಲೂಕಿಗೆ ವಿವಿಧ ಸರಕುಗಳು ಬರುತ್ತವೆ. ಕಾರ್ಕಳ, ಮೂಡುಬಿದರೆಯಿಂದ ಕಳಸ ತಾಲ್ಲೂಕಿಗೆ ಕಟ್ಟಡ ನಿರ್ಮಾಣ ವಸ್ತುಗಳು ಬರುತ್ತವೆ. ಸರಕು ಸಾಗಣೆ ವಾಹನಗಳು ಈ ರಸ್ತೆಯಲ್ಲಿ ಸಾಗುವುದರಿಂದ ಅವುಗಳ ನಿರ್ವಹಣಾ ವೆಚ್ಚ ಏರುತ್ತಿದೆ. ಪರಿಣಾಮವಾಗಿ ಸರಕುಗಳ ಬೆಲೆಯೂ ಹೆಚ್ಚುತ್ತಿದೆ.</p>.<p>‘ಕೊಟ್ಟಿಗೆಹಾರ-ಕಳಸ-ಎಸ್.ಕೆ. ಬಾರ್ಡರ್ ರಸ್ತೆ ನಿರ್ವಹಣೆಗೆ ಈ ಸಾಲಿನಲ್ಲಿ ₹26 ಲಕ್ಷ ಹಣವನ್ನು ಲೋಕೋಪಯೋಗಿ ಇಲಾಖೆ ನೀಡುತ್ತಿದೆ. ಈಗ 3 ದಿನದಲ್ಲಿ ಒಂದು ಜೆಸಿಬಿ ಬಳಸಿ ರಸ್ತೆ ಬದಿ ಹುಲ್ಲು ಕೆರೆದು ಆ ಹಣ ಗಿಟ್ಟಿಸಿಕೊಳ್ಳುವ ಯತ್ನ ನಡೆದಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಗಾ ವಹಿಸದೆ ಅನುಮಾನಕ್ಕೆ ಕಾರಣರಾಗಿದ್ದಾರೆ’ ಎಂದು ಮುಖಂಡ ರವಿ ರೈ ದೂರಿದರು.</p>.<p>ಸೋಮವಾರದ ಒಳಗೆ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಸ್ಥಳೀಯರನ್ನು ಒಗ್ಗೂಡಿಸಿ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಸ</strong>: ಮಲೆನಾಡನ್ನು ಕರಾವಳಿ ಜೊತೆಗೆ ಬೆಸೆಯುವ ಕಳಸ- ಕುದುರೆಮುಖ- ಎಸ್.ಕೆ. ಬಾರ್ಡರ್ ಹೆದ್ದಾರಿಯ ಹದಗೆಟ್ಟ ಸ್ಥಿತಿಯ ಬಗ್ಗೆ ಸ್ಥಳೀಯರಲ್ಲಿ ಆಕ್ರೋಶ ಹೆಚ್ಚುತ್ತಿದೆ.</p>.<p>3 ವರ್ಷಗಳಿಂದ ಈ ಹೆದ್ದಾರಿ ದುರಸ್ತಿ ಬಗ್ಗೆ ಕಳಸ, ಸಂಸೆ, ಜಾಂಬಳೆ, ನೆಲ್ಲಿಬೀಡು, ಕುದುರೆಮುಖ ಆಸುಪಾಸಿನ ಗ್ರಾಮಸ್ಥರು ಸತತವಾಗಿ ದನಿ ಎತ್ತುತ್ತಲೆ ಇದ್ದಾರೆ. ಅನೇಕ ಪ್ರತಿಭಟನೆಗಳು, ಘೆರಾವ್, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ ನಡೆದಿವೆ. ಆದರೆ ಈವರೆಗೂ ಈ ರಸ್ತೆ ದುರಸ್ತಿ ಆಗಿಲ್ಲ.</p>.<p>ಕಳೆದ ಮಳೆಗಾಲಕ್ಕೆ ಮುನ್ನ 8 ಕಿ.ಮೀ ರಸ್ತೆಯ ಡಾಂಬರೀಕರಣಕ್ಕೆ ಟೆಂಡರ್ ಕರೆದು, ಕೆಲಸ ಆರಂಭಗೊಂಡಿತ್ತು. ಆದರೆ, ಮಳೆಯ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಯಿತು. ಆಗಿನಿಂದಲೂ ಗುತ್ತಿಗೆದಾರರು ನಾಪತ್ತೆ ಆಗಿದ್ದಾರೆ. ಇಂಥವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.</p>.<div><blockquote>ಕಳೆದ ಬಾರಿ ಟೆಂಡರ್ ನಡೆದ ಕಾಮಗಾರಿಯ ಉಳಿದ ಭಾಗದ ಕೆಲಸ ಮುಂದಿನ ವಾರ ಆರಂಭವಾಗಲಿದೆ. ರಸ್ತೆಯ ಉಳಿದ ಭಾಗದ ಅಭಿವೃದ್ಧಿಗೂ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ </blockquote><span class="attribution">ಎಂಜಿನಿಯರ್ ಚನ್ನಬಸಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ಪಾಲಕ</span></div>.<p>ಸಂಸೆಯಿಂದ ಎಸ್.ಕೆ. ಬಾರ್ಡರ್ವರೆಗಿನ 34 ಕಿ.ಮೀ ರಸ್ತೆಯಲ್ಲಿ ಈಗಲೂ ವಾಹನ ಸಂಚಾರ ಅಸಾಧ್ಯ ಎಂಬಷ್ಟು ದೊಡ್ಡ ಗಾತ್ರದ ಗುಂಡಿಗಳು ಇವೆ. ಚರಂಡಿಗಳು ಮುಚ್ಚಿಕೊಂಡು ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ರಸ್ತೆ ಪಕ್ಕದ ಮರಗಳು, ಪೊದೆಗಳು ಹೆದ್ದಾರಿ ಆಕ್ರಮಿಸಿಕೊಳ್ಳುತ್ತಿವೆ. ಈ ಹೆದ್ದಾರಿಯನ್ನು ಪ್ರತಿನಿತ್ಯ ಬಳಸುವ ಸ್ಥಳೀಯರು ಮತ್ತು ಪ್ರವಾಸಿ ವಾಹನಗಳು ದುಃಸ್ಥಿತಿಗೆ ತಲುಪುತ್ತಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಜನರು ಹಿಡಿಶಾಪ ಹಾಕಿ ರಸ್ತೆ ಸವೆಸುವ ಸ್ಥಿತಿ ಇಲ್ಲಿದೆ.</p>.<p>ಕಳಸ ತಾಲ್ಲೂಕಿನಿಂದ ನಿತ್ಯ ಮಂಗಳೂರಿನ ಆಸ್ಪತ್ರೆಗಳಿಗೆ ನೂರಾರು ಜನರು ಮತ್ತು ಕಾಲೇಜು ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಮಂಗಳೂರಿನಿಂದ ಕಳಸ ತಾಲ್ಲೂಕಿಗೆ ವಿವಿಧ ಸರಕುಗಳು ಬರುತ್ತವೆ. ಕಾರ್ಕಳ, ಮೂಡುಬಿದರೆಯಿಂದ ಕಳಸ ತಾಲ್ಲೂಕಿಗೆ ಕಟ್ಟಡ ನಿರ್ಮಾಣ ವಸ್ತುಗಳು ಬರುತ್ತವೆ. ಸರಕು ಸಾಗಣೆ ವಾಹನಗಳು ಈ ರಸ್ತೆಯಲ್ಲಿ ಸಾಗುವುದರಿಂದ ಅವುಗಳ ನಿರ್ವಹಣಾ ವೆಚ್ಚ ಏರುತ್ತಿದೆ. ಪರಿಣಾಮವಾಗಿ ಸರಕುಗಳ ಬೆಲೆಯೂ ಹೆಚ್ಚುತ್ತಿದೆ.</p>.<p>‘ಕೊಟ್ಟಿಗೆಹಾರ-ಕಳಸ-ಎಸ್.ಕೆ. ಬಾರ್ಡರ್ ರಸ್ತೆ ನಿರ್ವಹಣೆಗೆ ಈ ಸಾಲಿನಲ್ಲಿ ₹26 ಲಕ್ಷ ಹಣವನ್ನು ಲೋಕೋಪಯೋಗಿ ಇಲಾಖೆ ನೀಡುತ್ತಿದೆ. ಈಗ 3 ದಿನದಲ್ಲಿ ಒಂದು ಜೆಸಿಬಿ ಬಳಸಿ ರಸ್ತೆ ಬದಿ ಹುಲ್ಲು ಕೆರೆದು ಆ ಹಣ ಗಿಟ್ಟಿಸಿಕೊಳ್ಳುವ ಯತ್ನ ನಡೆದಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಗಾ ವಹಿಸದೆ ಅನುಮಾನಕ್ಕೆ ಕಾರಣರಾಗಿದ್ದಾರೆ’ ಎಂದು ಮುಖಂಡ ರವಿ ರೈ ದೂರಿದರು.</p>.<p>ಸೋಮವಾರದ ಒಳಗೆ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಸ್ಥಳೀಯರನ್ನು ಒಗ್ಗೂಡಿಸಿ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>