<p><strong>ಶೃಂಗೇರಿ: ‘</strong>ಶಂಕರಚಾರ್ಯರು ಸನಾತನ ಧರ್ಮ ಅವನತಿಯಲ್ಲಿದ್ದಾಗ ಅವತಾರವೆತ್ತಿ ಹಿಂದೂ ಧರ್ಮದ ಉಳಿವಿಗೆ ಕಾರಣರಾದರು’ ಎಂದು ಧಾರ್ಮಿಕ ಚಿಂತಕ ಉಳುವೆ ಗಿರೀಶ್ ಹೇಳಿದರು.</p>.<p>ಮೆಣಸೆ ಗ್ರಾಮ ಪಂಚಾಯಿತಿಯ ಕೆರೆಮನೆಯಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಆಯೋಜಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಚಾರ್ಯರ ಬಗ್ಗೆ ಅವರು ಉಪನ್ಯಾಸ ನೀಡಿದರು.</p>.<p>‘ಧರ್ಮಾಚರಣೆ, ಹೋಮ, ಹವನಾದಿಗಳು ಸಮಾಜದಲ್ಲಿ ನಡೆಯುತ್ತಿದ್ದು, ಇದಕ್ಕೆಲ್ಲಾ ಕಾರಣೀಭೂತರು ಶಂಕರಚಾರ್ಯರು ಎಂಬುದನ್ನು ಮರೆಯುವಂತಿಲ್ಲ. ಮಾನಸಿಕ ನೆಮ್ಮದಿ ದೊರಕಬೇಕಾದರೆ ದೇವರ ಧ್ಯಾನ, ಪೂಜೆ ಮಾಡಬೇಕು’ ಎಂದರು.</p>.<p>ಶಂಕರಚಾರ್ಯರ ಭಾವಚಿತ್ರಕ್ಕೆ ಮಹಾಸಭಾದ ಗುಬ್ಬಗೋಡು ವೆಂಕಟರಾವ್ ಪೂಜೆ ಸಲ್ಲಿಸಿ, ಮಂಗಳಾರತಿ ನೆರವೇರಿಸಿದರು. ಘಟಕದ ಕಾರ್ಯದರ್ಶಿ ಪ್ರವೀಣ್ ಮರಟೆ, ಶ್ರೀನಿವಾಸರಾವ್, ವಸಂತ, ಗೀತಾಭಾಸ್ಕರರಾವ್, ಜಯಲಕ್ಷ್ಮೀ, ಸುಜಾತ, ನಾಗಲಕ್ಷ್ಮಿ, ಮೀನಾಕ್ಷಿ, ಹನಕೋಡು ದಿವಾಕರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ: ‘</strong>ಶಂಕರಚಾರ್ಯರು ಸನಾತನ ಧರ್ಮ ಅವನತಿಯಲ್ಲಿದ್ದಾಗ ಅವತಾರವೆತ್ತಿ ಹಿಂದೂ ಧರ್ಮದ ಉಳಿವಿಗೆ ಕಾರಣರಾದರು’ ಎಂದು ಧಾರ್ಮಿಕ ಚಿಂತಕ ಉಳುವೆ ಗಿರೀಶ್ ಹೇಳಿದರು.</p>.<p>ಮೆಣಸೆ ಗ್ರಾಮ ಪಂಚಾಯಿತಿಯ ಕೆರೆಮನೆಯಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಆಯೋಜಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಚಾರ್ಯರ ಬಗ್ಗೆ ಅವರು ಉಪನ್ಯಾಸ ನೀಡಿದರು.</p>.<p>‘ಧರ್ಮಾಚರಣೆ, ಹೋಮ, ಹವನಾದಿಗಳು ಸಮಾಜದಲ್ಲಿ ನಡೆಯುತ್ತಿದ್ದು, ಇದಕ್ಕೆಲ್ಲಾ ಕಾರಣೀಭೂತರು ಶಂಕರಚಾರ್ಯರು ಎಂಬುದನ್ನು ಮರೆಯುವಂತಿಲ್ಲ. ಮಾನಸಿಕ ನೆಮ್ಮದಿ ದೊರಕಬೇಕಾದರೆ ದೇವರ ಧ್ಯಾನ, ಪೂಜೆ ಮಾಡಬೇಕು’ ಎಂದರು.</p>.<p>ಶಂಕರಚಾರ್ಯರ ಭಾವಚಿತ್ರಕ್ಕೆ ಮಹಾಸಭಾದ ಗುಬ್ಬಗೋಡು ವೆಂಕಟರಾವ್ ಪೂಜೆ ಸಲ್ಲಿಸಿ, ಮಂಗಳಾರತಿ ನೆರವೇರಿಸಿದರು. ಘಟಕದ ಕಾರ್ಯದರ್ಶಿ ಪ್ರವೀಣ್ ಮರಟೆ, ಶ್ರೀನಿವಾಸರಾವ್, ವಸಂತ, ಗೀತಾಭಾಸ್ಕರರಾವ್, ಜಯಲಕ್ಷ್ಮೀ, ಸುಜಾತ, ನಾಗಲಕ್ಷ್ಮಿ, ಮೀನಾಕ್ಷಿ, ಹನಕೋಡು ದಿವಾಕರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>