ಈ ಶಾಲೆಗೆ ಕಾಮ್ಲೆಗುಡ್ಡ, ಆನೆಗುಂದ, ಕಿಕ್ರೆ, ಕಿರುಕೋಡು, ಹಾಲಂದೂರು, ರಾಜಾನಗರ, ಕಲ್ಕಟ್ಟೆ, ಶೃಂಗೇರಿ ಪಟ್ಟಣ ಮೊದಲಾದ ಪ್ರದೇಶಗಳಿಂದ ಮಕ್ಕಳು ಬರುತ್ತಾರೆ. ಕೊಪ್ಪತಾಲ್ಲೂಕಿನ ಮೇಗೂರು, ಕಚಿಗೆ, ಕುಳಗಾರು, ಎತ್ತನಟ್ಟಿ, ಅಗಳಗಂಡಿಯಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ದೂರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಶಾಲೆಗೆ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ ಡಾ.ಆರತಿಕೃಷ್ಣ ಮತ್ತು ಸಂಪತ್ ಕುಮಾರ್ 2 ಬಸ್ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.