<p><strong>ಶೃಂಗೇರಿ: </strong>ಎಂಟು ದಶಕಗಳನ್ನು ಕಂಡಿರುವ ಮೆಣಸೆಯ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೆಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಕೋವಿಡ್–19 ಪರಿಸ್ಥಿತಿಯಲ್ಲೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದಿರುವುದು ಇದಕ್ಕೆ ನಿದರ್ಶನ.</p>.<p>1940ರಲ್ಲಿ ಪ್ರಾರಂಭಗೊಂಡ ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಶಿಕ್ಷಣ ದೊರೆಯುತ್ತದೆ. ಒಂದರಿಂದ 8ನೇ ಕ್ಲಾಸಿನವರೆಗೆ 243 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ.</p>.<p>ಈ ಶಾಲೆಗೆ ಕಾಮ್ಲೆಗುಡ್ಡ, ಆನೆಗುಂದ, ಕಿಕ್ರೆ, ಕಿರುಕೋಡು, ಹಾಲಂದೂರು, ರಾಜಾನಗರ, ಕಲ್ಕಟ್ಟೆ, ಶೃಂಗೇರಿ ಪಟ್ಟಣ ಮೊದಲಾದ ಪ್ರದೇಶಗಳಿಂದ ಮಕ್ಕಳು ಬರುತ್ತಾರೆ. ಕೊಪ್ಪತಾಲ್ಲೂಕಿನ ಮೇಗೂರು, ಕಚಿಗೆ, ಕುಳಗಾರು, ಎತ್ತನಟ್ಟಿ, ಅಗಳಗಂಡಿಯಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ದೂರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಶಾಲೆಗೆ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ ಡಾ.ಆರತಿಕೃಷ್ಣ ಮತ್ತು ಸಂಪತ್ ಕುಮಾರ್ 2 ಬಸ್ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.</p>.<p>‘ಶಾಲೆಯಲ್ಲಿ ಯಾವುದೇ ಕೊರತೆ ಇಲ್ಲ. ಶಾಲೆಯನ್ನು ಮಾದರಿ ಶಾಲೆ ಮಾಡಬೇಕು ಎಂಬುದು ನಮ್ಮ ಕನಸು’ ಎನ್ನುತ್ತಾರೆ ಶಿಕ್ಷಕರು. ಕ್ರೀಡಾಂಗಣ, ಸ್ಮಾರ್ಟ್ಕ್ಲಾಸ್, ರಂಗಮಂದಿರ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, 13 ಕಂಪ್ಯೂಟರ್, ಒಂಬತ್ತು ಶಿಕ್ಷಕರನ್ನು ಶಾಲೆ ಹೊಂದಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಉದಯ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ: </strong>ಎಂಟು ದಶಕಗಳನ್ನು ಕಂಡಿರುವ ಮೆಣಸೆಯ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೆಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಕೋವಿಡ್–19 ಪರಿಸ್ಥಿತಿಯಲ್ಲೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದಿರುವುದು ಇದಕ್ಕೆ ನಿದರ್ಶನ.</p>.<p>1940ರಲ್ಲಿ ಪ್ರಾರಂಭಗೊಂಡ ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಶಿಕ್ಷಣ ದೊರೆಯುತ್ತದೆ. ಒಂದರಿಂದ 8ನೇ ಕ್ಲಾಸಿನವರೆಗೆ 243 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ.</p>.<p>ಈ ಶಾಲೆಗೆ ಕಾಮ್ಲೆಗುಡ್ಡ, ಆನೆಗುಂದ, ಕಿಕ್ರೆ, ಕಿರುಕೋಡು, ಹಾಲಂದೂರು, ರಾಜಾನಗರ, ಕಲ್ಕಟ್ಟೆ, ಶೃಂಗೇರಿ ಪಟ್ಟಣ ಮೊದಲಾದ ಪ್ರದೇಶಗಳಿಂದ ಮಕ್ಕಳು ಬರುತ್ತಾರೆ. ಕೊಪ್ಪತಾಲ್ಲೂಕಿನ ಮೇಗೂರು, ಕಚಿಗೆ, ಕುಳಗಾರು, ಎತ್ತನಟ್ಟಿ, ಅಗಳಗಂಡಿಯಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ದೂರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಶಾಲೆಗೆ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ ಡಾ.ಆರತಿಕೃಷ್ಣ ಮತ್ತು ಸಂಪತ್ ಕುಮಾರ್ 2 ಬಸ್ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.</p>.<p>‘ಶಾಲೆಯಲ್ಲಿ ಯಾವುದೇ ಕೊರತೆ ಇಲ್ಲ. ಶಾಲೆಯನ್ನು ಮಾದರಿ ಶಾಲೆ ಮಾಡಬೇಕು ಎಂಬುದು ನಮ್ಮ ಕನಸು’ ಎನ್ನುತ್ತಾರೆ ಶಿಕ್ಷಕರು. ಕ್ರೀಡಾಂಗಣ, ಸ್ಮಾರ್ಟ್ಕ್ಲಾಸ್, ರಂಗಮಂದಿರ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, 13 ಕಂಪ್ಯೂಟರ್, ಒಂಬತ್ತು ಶಿಕ್ಷಕರನ್ನು ಶಾಲೆ ಹೊಂದಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಉದಯ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>