<p><strong>ಶೃಂಗೇರಿ:</strong> ‘ಕೋವಿಡ್ ಸೋಂಕಿತರನ್ನು ಸಾಮಾಜಿಕ ಕಳಂಕಿತರು ಎನ್ನುವ ತಪ್ಪು ಅಭಿಪ್ರಾಯವಿದೆ. ಪ್ರಪಂಚದಲ್ಲಿ ಹಲವಾರು ಸೋಂಕು ಬಂದು ಹೋಗಿದೆ, ಅದರಲ್ಲಿ ಕೊರೊನಾ ಕೂಡಾ ಒಂದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.</p>.<p>ಶೃಂಗೇರಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.</p>.<p>‘ಕೋವಿಡ್ ಬಹಳ ಸಾಮಾನ್ಯವಾದ ಸೋಂಕು. ಆದರೆ, ಇದರ ಹರಡುವಿಕೆಯ ಪ್ರಮಾಣ ಹೆಚ್ಚಾಗಿ ಇರುವುದರಿಂದ ಜನರು ಜಾಗ್ರತೆ ವಹಿಸಬೇಕು. ಈ ವೈರಸ್ನ್ನು ತಡೆಗಟ್ಟಲು ಸರ್ಕಾರವು ಗುಣಮಟ್ಟದ ಚಿಕಿತ್ಸಾ ಕ್ರಮ ವಹಿಸುತ್ತಿದೆ. ವಿಶ್ವದಲ್ಲಿ ಈ ಸೋಂಕಿನ ಹರಡುವಿಕೆ ಪ್ರಮಾಣ ಹೋಲಿಸಿದ್ದಲ್ಲಿ ರಾಜ್ಯದಲ್ಲಿ ಅತ್ಯಂತ ಕಡಿಮೆ ಇದೆ’ ಎಂದರು.</p>.<p>‘ಲಾಕ್ಡೌನ್ ಎಂಬುದು ಕಾಯಂ ಪರಿಹಾರವಲ್ಲ. ಜನರ ಜೀವ ಉಳಿಸಲು ಹಾಗೂ ಜೀವನ ನಡೆಸಲು ಅನಿವಾರ್ಯವಾಗಿ ಸರ್ಕಾರವು ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ವೈರಸ್ ತಡೆಗಟ್ಟಲು ಸರ್ಕಾರವು ಶ್ರಮಿಸುತ್ತಿದೆ. ಮಾಸ್ಕ್ ಧರಿಸಿ, ಅಂತರ ಕಾಪಾಡುವ ಮೂಲಕ ಕೊರೊನಾ ಜೊತೆ ಬದುಕಲು ಕಲಿಯಬೇಕಿದೆ’ ಎಂದರು.</p>.<p>ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ತರೀಕೆರೆಯ ಫಲಿತಾಂಶ ಅದಲು ಬದಲಾಗಿದೆ. ಇದು ಪುನಾರವರ್ತನೆ ಆಗಬಾರದು ಎಂದು ವೈದ್ಯರಿಗೆ ಸೂಚಿಸಿದ್ದೇನೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ:</strong> ‘ಕೋವಿಡ್ ಸೋಂಕಿತರನ್ನು ಸಾಮಾಜಿಕ ಕಳಂಕಿತರು ಎನ್ನುವ ತಪ್ಪು ಅಭಿಪ್ರಾಯವಿದೆ. ಪ್ರಪಂಚದಲ್ಲಿ ಹಲವಾರು ಸೋಂಕು ಬಂದು ಹೋಗಿದೆ, ಅದರಲ್ಲಿ ಕೊರೊನಾ ಕೂಡಾ ಒಂದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.</p>.<p>ಶೃಂಗೇರಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.</p>.<p>‘ಕೋವಿಡ್ ಬಹಳ ಸಾಮಾನ್ಯವಾದ ಸೋಂಕು. ಆದರೆ, ಇದರ ಹರಡುವಿಕೆಯ ಪ್ರಮಾಣ ಹೆಚ್ಚಾಗಿ ಇರುವುದರಿಂದ ಜನರು ಜಾಗ್ರತೆ ವಹಿಸಬೇಕು. ಈ ವೈರಸ್ನ್ನು ತಡೆಗಟ್ಟಲು ಸರ್ಕಾರವು ಗುಣಮಟ್ಟದ ಚಿಕಿತ್ಸಾ ಕ್ರಮ ವಹಿಸುತ್ತಿದೆ. ವಿಶ್ವದಲ್ಲಿ ಈ ಸೋಂಕಿನ ಹರಡುವಿಕೆ ಪ್ರಮಾಣ ಹೋಲಿಸಿದ್ದಲ್ಲಿ ರಾಜ್ಯದಲ್ಲಿ ಅತ್ಯಂತ ಕಡಿಮೆ ಇದೆ’ ಎಂದರು.</p>.<p>‘ಲಾಕ್ಡೌನ್ ಎಂಬುದು ಕಾಯಂ ಪರಿಹಾರವಲ್ಲ. ಜನರ ಜೀವ ಉಳಿಸಲು ಹಾಗೂ ಜೀವನ ನಡೆಸಲು ಅನಿವಾರ್ಯವಾಗಿ ಸರ್ಕಾರವು ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ವೈರಸ್ ತಡೆಗಟ್ಟಲು ಸರ್ಕಾರವು ಶ್ರಮಿಸುತ್ತಿದೆ. ಮಾಸ್ಕ್ ಧರಿಸಿ, ಅಂತರ ಕಾಪಾಡುವ ಮೂಲಕ ಕೊರೊನಾ ಜೊತೆ ಬದುಕಲು ಕಲಿಯಬೇಕಿದೆ’ ಎಂದರು.</p>.<p>ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ತರೀಕೆರೆಯ ಫಲಿತಾಂಶ ಅದಲು ಬದಲಾಗಿದೆ. ಇದು ಪುನಾರವರ್ತನೆ ಆಗಬಾರದು ಎಂದು ವೈದ್ಯರಿಗೆ ಸೂಚಿಸಿದ್ದೇನೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>