ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ತಡೆಗೆ ಲಾಕ್‌ಡೌನ್‌ ಶಾಶ್ವತವಾದ ಪರಿಹಾರ ಅಲ್ಲ’

Last Updated 3 ಜೂನ್ 2020, 10:59 IST
ಅಕ್ಷರ ಗಾತ್ರ

ಶೃಂಗೇರಿ: ‘ಕೋವಿಡ್‌ ಸೋಂಕಿತರನ್ನು ಸಾಮಾಜಿಕ ಕಳಂಕಿತರು ಎನ್ನುವ ತಪ್ಪು ಅಭಿಪ್ರಾಯವಿದೆ. ಪ್ರಪಂಚದಲ್ಲಿ ಹಲವಾರು ಸೋಂಕು ಬಂದು ಹೋಗಿದೆ, ಅದರಲ್ಲಿ ಕೊರೊನಾ ಕೂಡಾ ಒಂದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.

ಶೃಂಗೇರಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಕೋವಿಡ್‌ ಬಹಳ ಸಾಮಾನ್ಯವಾದ ಸೋಂಕು. ಆದರೆ, ಇದರ ಹರಡುವಿಕೆಯ ಪ್ರಮಾಣ ಹೆಚ್ಚಾಗಿ ಇರುವುದರಿಂದ ಜನರು ಜಾಗ್ರತೆ ವಹಿಸಬೇಕು. ಈ ವೈರಸ್‍ನ್ನು ತಡೆಗಟ್ಟಲು ಸರ್ಕಾರವು ಗುಣಮಟ್ಟದ ಚಿಕಿತ್ಸಾ ಕ್ರಮ ವಹಿಸುತ್ತಿದೆ. ವಿಶ್ವದಲ್ಲಿ ಈ ಸೋಂಕಿನ ಹರಡುವಿಕೆ ಪ್ರಮಾಣ ಹೋಲಿಸಿದ್ದಲ್ಲಿ ರಾಜ್ಯದಲ್ಲಿ ಅತ್ಯಂತ ಕಡಿಮೆ ಇದೆ’ ಎಂದರು.

‘ಲಾಕ್‍ಡೌನ್ ಎಂಬುದು ಕಾಯಂ ಪರಿಹಾರವಲ್ಲ. ಜನರ ಜೀವ ಉಳಿಸಲು ಹಾಗೂ ಜೀವನ ನಡೆಸಲು ಅನಿವಾರ್ಯವಾಗಿ ಸರ್ಕಾರವು ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ವೈರಸ್ ತಡೆಗಟ್ಟಲು ಸರ್ಕಾರವು ಶ್ರಮಿಸುತ್ತಿದೆ. ಮಾಸ್ಕ್‌ ಧರಿಸಿ, ಅಂತರ ಕಾಪಾಡುವ ಮೂಲಕ ಕೊರೊನಾ ಜೊತೆ ಬದುಕಲು ಕಲಿಯಬೇಕಿದೆ’ ಎಂದರು.

ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ತರೀಕೆರೆಯ ಫಲಿತಾಂಶ ಅದಲು ಬದಲಾಗಿದೆ. ಇದು ಪುನಾರವರ್ತನೆ ಆಗಬಾರದು ಎಂದು ವೈದ್ಯರಿಗೆ ಸೂಚಿಸಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT