‘ಮಾಗುಂಡಿ, ಖಾಂಡ್ಯದ ಕೆಲವು ಭಾಗ, ಬಸರೀಕಟ್ಟೆ ಭಾಗದಲ್ಲಿ ಹೆಚ್ಚು ಹಾನಿ ಸಂಭವಿಸಿದೆ. 4.9 ಸಾವಿರ ಹೆಕ್ಟೇರ್ ತೋಟದ ಪ್ರದೇಶ ಹಾನಿಯಿಂದ ಅಂದಾಜು ₹ 6.83 ಕೋಟಿ, 175 ಎಕರೆ ಕೃಷಿ ಭೂಮಿ ಹಾನಿಯಿಂದ ಅಂದಾಜು ಸುಮಾರು ₹ 3.50 ಕೋಟಿ ನಷ್ಟ ಸಂಭವಿಸಿದೆ. 12 ಮನೆಗಳು ಪೂರ್ಣ ಹಾನಿ, 31 ಮನೆಗಳು ತೀವ್ರ ಹಾನಿ, 87 ಮನೆಗಳು ಭಾಗಶ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆ ₹ 17 ಕೋಟಿಯಷ್ಟು ಹಾನಿಯಾಗಿದೆ. ಪಿ.ಆರ್.ಇ.ಡಿ ಗೆ ಸೇರಿದ ರಸ್ತೆ ₹ 157 ಕೋಟಿಯಷ್ಟು ಹಾನಿ ಸಂಭವಿಸಿದೆ’ ಎಂದು ವಿವರಿಸಿದರು.