ರೈತರಿಗೆ ತೋಟಗಾರಿಕೆ ಬೆಳೆಗಳಿಂದ ಫಸಲು ಬಾರದಿದ್ದರೂ ಬೇಡ, ಗಿಡವಾದರೂ ಉಳಿದುಕೊಳ್ಳಲಿ ಎಂಬ ಚಿಂತೆ ಕಾಡುತ್ತಿದೆ. ಮಳೆ ಬಾರದಿದ್ದರೆ ಮುಂದಿನ 15 - 20 ದಿನಗಳಲ್ಲಿ ಹೊಸದಾಗಿ ನಾಟಿ ಮಾಡಿದ ಅಡಿಕೆ ಗಿಡಗಳು ಒಣಗಿ ಸಾಯುತ್ತವೆ. ತಾಲ್ಲೂಕಿನಾದ್ಯಂತ 3,500 ಎಕರೆ ಪ್ರದೇಶದಲ್ಲಿ ಸುಮಾರು 18 ಲಕ್ಷಕ್ಕೂ ಹೆಚ್ಚು ಹೆಚ್ಚು ಅಡಿಕೆ ಗಿಡಗಳನ್ನು ಹೊಸದಾಗಿ ನಾಟಿ ಮಾಡಲಾಗಿದೆ. ರೈತರು ಅಡಿಕೆ- ತೆಂಗು ಉಳಿಸಲು ಶ್ರಮ ಪಡುತ್ತಿದ್ದರೆ, ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಹೆಚ್ಚುತ್ತಿದೆ.