ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯ ಪ್ರತ್ಯೇಕ ನಿಗಾ ವಾರ್ಡ್ನಲ್ಲಿದ್ದ ವ್ಯಕ್ತಿ (53) ಶೌಚಾಲಯದಲ್ಲಿ ನೇಣು ಹಾಕಿಕೊಂಡಿದ್ದಾರೆ.
ವೈದ್ಯರು ಬೆಳಿಗ್ಗೆ ತಪಾಸಣೆಗೆ ವಾರ್ಡ್ಗೆ ತೆರಳಿದಾಗ, ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಈ ವ್ಯಕ್ತಿಯ ಗಂಟಲ ದ್ರವ, ಮೂಗಿನ ದ್ರವ ಪರೀಕ್ಷೆ ವರದಿ ಬಂದಿತ್ತು. ಸೋಂಕು ದೃಢಪಟ್ಟಿರಲಿಲ್ಲ.
ಕೊಪ್ಪ ತಾಲ್ಲೂಕಿನ ಈ ವ್ಯಕ್ತಿಗೆ ಜ್ವರ, ಕೆಮ್ಮು ಲಕ್ಷಣಗಳಿದ್ದವು. ಹೀಗಾಗಿ ಈತನನ್ನು ನಗರದ ಕೋವಿಡ್ ನಿಗಾ ಕೇಂದ್ರಕ್ಕೆ ಕರೆ ತರಲಾಗಿತ್ತು. ಇದೇ 20ರಂದು ಪ್ರತ್ಯೇಕ ನಿಗಾ ವಾರ್ಡ್ಗೆ ವರ್ಗಾಯಿಸಲಾಗಿತ್ತು.
ಈತನಿಗೆ ಮೂಲವ್ಯಾಧಿ ಇತ್ತು. ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ.