ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದೆ. ಅಜ್ಜಂಪುರದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿಹೊತ್ತಿಕೊಂಡು ತುದಿಭಾಗ ಸುಟ್ಟಿದೆ.
ಎನ್.ಆರ್.ಪುರ, ಕೊಪ್ಪ, ಮೂಡಿಗೆರೆ,ಕಳಸ, ಶೃಂಗೇರಿ, ಕಡೂರು ಭಾಗದಲ್ಲಿ ಮಳೆಯಾಗಿದೆ. ಎನ್.ಆರ್.ಪುರ ಭಾಗದಲ್ಲಿ ಸುಮಾರು ಅರ್ಧ ಗಂಟೆ ಬಿರುಸಾಗಿ ಸುರಿದಿದೆ. ಗುಡುಗುಮಿಂಚಿನ ಆರ್ಭಟ ಇದೆ.