<p><strong>ಚಿಕ್ಕಮಗಳೂರು:</strong> ನಗರದ ಬೈಪಾಸ್ ರಸ್ತೆಯ (ಎಐಟಿ ವೃತ್ತದಿಂದ ಹಿರೇಮಗಳೂರು ಬಳಿಯ ವೃತ್ತದವರೆಗೆ) ವಿಸ್ತರಣೆ ಕಾಮಗಾರಿ ಶುರುವಾಗಿದೆ, ರಸ್ತೆಯ ಬದಿಯ ಮರಗಳ ಹನನ ಕೈಗೆತ್ತಿಕೊಳ್ಳಲಾಗಿದೆ.</p>.<p>ರಾಷ್ಟ್ರೀಯ ಹೆದ್ದಾರಿ (ಎನ್ಎಚ್) ಹಾಸನ ವಿಭಾಗವು ವಿಸ್ತರಣೆ ಕಾರ್ಯ ನಿರ್ವಹಿಸುತ್ತಿದೆ. ಕಾಮಗಾರಿಗೆ ಮಾರ್ಗದ ಇಕ್ಕೆಲಗಳ ಒಟ್ಟು 192ಮರಗಳು ಉರುಳಲಿವೆ.</p>.<p>5.5 ಮೀಟರ್ ವಿಸ್ತೀರ್ಣದ ಈ ರಸ್ತೆಯು 22.5 ಮೀಟರ್ಗೆ ವಿಸ್ತರಣೆಯಾಗಲಿದೆ. ವಿಭಜಕ, ರಸ್ತೆ ಬದಿಯಲ್ಲಿ ಕಾಂಕ್ರಿಟ್ ಮೋರಿ ನಿರ್ಮಾಣವಾಗಲಿದೆ. ಒಟ್ಟಾರೆ 3.28 ಕಿ.ಮೀ ನಿರ್ಮಾಣಕ್ಕೆ ₹ 29.4 ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿ ಮುಗಿಸಲು 2022 ರ ಫೆಬ್ರುವರಿವರೆಗೆ ಗಡುವು ನೀಡಲಾಗಿದೆ.</p>.<p>ಮರಗಳ ಹನನಕ್ಕೆ ₹ 18.86 ಲಕ್ಷವನ್ನು ಅರಣ್ಯ ಇಲಾಖೆಗೆ ಪಾವತಿಸಲಾಗಿದೆ. ಈ ಪೈಕಿ ಸಸಿ ನೆಟ್ಟು ಬೆಳೆಸಲು ಎನ್ಎಚ್ನಿಂದ ₹ 15.7 ಲಕ್ಷ ಹಾಗೂ ಮರಗಳ ಟೆಂಡರ್ ಪಡೆದವರು ಬಾಕಿ ₹ 3.2 ಲಕ್ಷ ಪಾವತಿಸಿದ್ದಾರೆ ಎಂದು ಎಂಜಿನಿಯರ್ವೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಆಲ, ಆರಳಿ, ಸಂಪಿಗೆ ಸಹಿತ ವಿವಿಧ ಜಾತಿಯ ಮರಗಳನ್ನು ಕಡಿಯಲಾಗುತ್ತಿದೆ. ಈಗಾಗಲೇ ಹಲವು ಮರಗಳನ್ನು ಕತ್ತರಿಸಲಾಗಿದೆ. ಮರಗಳನ್ನು ಕಡಿದಿರುವ ಕಡೆಗಳಲ್ಲಿ ರಸ್ತೆ ಬೋಳಾಗಿ ಕಾಣುತ್ತಿದೆ. ಮೂಲ ಚಹರೆಯೇ ಬದಲಾಗುತ್ತಿದೆ.</p>.<p>ನಗರ ಮತ್ತು ಸುತ್ತಮುತ್ತ (ಕೆ.ಎಂ ರಸ್ತೆ (ಎನ್ಎಚ್–173), ಬಿ.ಎಚ್ ರಸ್ತೆ (ಎನ್ಎಚ್–206), ರಾಮನಹಳ್ಳಿ ಮುಖ್ಯರಸ್ತೆ (ರತ್ನಗಿರಿ ಬೋರೆ ಸಮೀಪ)...) ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯಲ್ಲಿ ಎರಡೂವರೆ ವರ್ಷ ಅವಧಿಯಲ್ಲಿ 4ಸಾವಿರಕ್ಕೂ ಹೆಚ್ಚು ಮರಗಳನ್ನು ಉರುಳಿಸಲಾಗಿದೆ.</p>.<p>‘ಒಂದು ವೃಕ್ಷ ಹನನಕ್ಕೆ ಪರ್ಯಾಯವಾಗಿ 10 ಸಸಿಗಳನ್ನು ನೆಟ್ಟು ಪೋಷಿಸುತ್ತೇವೆ ಎಂದು ಅರಣ್ಯ ಇಲಾಖೆಯವರು ಕತೆ ಹೇಳುತ್ತಾರೆ. ಆದರೆ, ಕಾರ್ಯಗತ ಮಾಡಲ್ಲ. ರಸ್ತೆ ಬದಿಯ ಸಾಲುಮರಗಳನ್ನು ಉಳಿಸುವ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ’ ಎಂದು ಪರಿಸರಾಸಕ್ತರೊಬ್ಬರು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ನಗರದ ಬೈಪಾಸ್ ರಸ್ತೆಯ (ಎಐಟಿ ವೃತ್ತದಿಂದ ಹಿರೇಮಗಳೂರು ಬಳಿಯ ವೃತ್ತದವರೆಗೆ) ವಿಸ್ತರಣೆ ಕಾಮಗಾರಿ ಶುರುವಾಗಿದೆ, ರಸ್ತೆಯ ಬದಿಯ ಮರಗಳ ಹನನ ಕೈಗೆತ್ತಿಕೊಳ್ಳಲಾಗಿದೆ.</p>.<p>ರಾಷ್ಟ್ರೀಯ ಹೆದ್ದಾರಿ (ಎನ್ಎಚ್) ಹಾಸನ ವಿಭಾಗವು ವಿಸ್ತರಣೆ ಕಾರ್ಯ ನಿರ್ವಹಿಸುತ್ತಿದೆ. ಕಾಮಗಾರಿಗೆ ಮಾರ್ಗದ ಇಕ್ಕೆಲಗಳ ಒಟ್ಟು 192ಮರಗಳು ಉರುಳಲಿವೆ.</p>.<p>5.5 ಮೀಟರ್ ವಿಸ್ತೀರ್ಣದ ಈ ರಸ್ತೆಯು 22.5 ಮೀಟರ್ಗೆ ವಿಸ್ತರಣೆಯಾಗಲಿದೆ. ವಿಭಜಕ, ರಸ್ತೆ ಬದಿಯಲ್ಲಿ ಕಾಂಕ್ರಿಟ್ ಮೋರಿ ನಿರ್ಮಾಣವಾಗಲಿದೆ. ಒಟ್ಟಾರೆ 3.28 ಕಿ.ಮೀ ನಿರ್ಮಾಣಕ್ಕೆ ₹ 29.4 ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿ ಮುಗಿಸಲು 2022 ರ ಫೆಬ್ರುವರಿವರೆಗೆ ಗಡುವು ನೀಡಲಾಗಿದೆ.</p>.<p>ಮರಗಳ ಹನನಕ್ಕೆ ₹ 18.86 ಲಕ್ಷವನ್ನು ಅರಣ್ಯ ಇಲಾಖೆಗೆ ಪಾವತಿಸಲಾಗಿದೆ. ಈ ಪೈಕಿ ಸಸಿ ನೆಟ್ಟು ಬೆಳೆಸಲು ಎನ್ಎಚ್ನಿಂದ ₹ 15.7 ಲಕ್ಷ ಹಾಗೂ ಮರಗಳ ಟೆಂಡರ್ ಪಡೆದವರು ಬಾಕಿ ₹ 3.2 ಲಕ್ಷ ಪಾವತಿಸಿದ್ದಾರೆ ಎಂದು ಎಂಜಿನಿಯರ್ವೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಆಲ, ಆರಳಿ, ಸಂಪಿಗೆ ಸಹಿತ ವಿವಿಧ ಜಾತಿಯ ಮರಗಳನ್ನು ಕಡಿಯಲಾಗುತ್ತಿದೆ. ಈಗಾಗಲೇ ಹಲವು ಮರಗಳನ್ನು ಕತ್ತರಿಸಲಾಗಿದೆ. ಮರಗಳನ್ನು ಕಡಿದಿರುವ ಕಡೆಗಳಲ್ಲಿ ರಸ್ತೆ ಬೋಳಾಗಿ ಕಾಣುತ್ತಿದೆ. ಮೂಲ ಚಹರೆಯೇ ಬದಲಾಗುತ್ತಿದೆ.</p>.<p>ನಗರ ಮತ್ತು ಸುತ್ತಮುತ್ತ (ಕೆ.ಎಂ ರಸ್ತೆ (ಎನ್ಎಚ್–173), ಬಿ.ಎಚ್ ರಸ್ತೆ (ಎನ್ಎಚ್–206), ರಾಮನಹಳ್ಳಿ ಮುಖ್ಯರಸ್ತೆ (ರತ್ನಗಿರಿ ಬೋರೆ ಸಮೀಪ)...) ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯಲ್ಲಿ ಎರಡೂವರೆ ವರ್ಷ ಅವಧಿಯಲ್ಲಿ 4ಸಾವಿರಕ್ಕೂ ಹೆಚ್ಚು ಮರಗಳನ್ನು ಉರುಳಿಸಲಾಗಿದೆ.</p>.<p>‘ಒಂದು ವೃಕ್ಷ ಹನನಕ್ಕೆ ಪರ್ಯಾಯವಾಗಿ 10 ಸಸಿಗಳನ್ನು ನೆಟ್ಟು ಪೋಷಿಸುತ್ತೇವೆ ಎಂದು ಅರಣ್ಯ ಇಲಾಖೆಯವರು ಕತೆ ಹೇಳುತ್ತಾರೆ. ಆದರೆ, ಕಾರ್ಯಗತ ಮಾಡಲ್ಲ. ರಸ್ತೆ ಬದಿಯ ಸಾಲುಮರಗಳನ್ನು ಉಳಿಸುವ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ’ ಎಂದು ಪರಿಸರಾಸಕ್ತರೊಬ್ಬರು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>