ನಗರ ಮತ್ತು ಸುತ್ತಮುತ್ತ (ಕೆ.ಎಂ ರಸ್ತೆ (ಎನ್ಎಚ್–173), ಬಿ.ಎಚ್ ರಸ್ತೆ (ಎನ್ಎಚ್–206), ರಾಮನಹಳ್ಳಿ ಮುಖ್ಯರಸ್ತೆ (ರತ್ನಗಿರಿ ಬೋರೆ ಸಮೀಪ)...) ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯಲ್ಲಿ ಎರಡೂವರೆ ವರ್ಷ ಅವಧಿಯಲ್ಲಿ 4ಸಾವಿರಕ್ಕೂ ಹೆಚ್ಚು ಮರಗಳನ್ನು ಉರುಳಿಸಲಾಗಿದೆ.