ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಕೋವಿಡ್‌ನಿಂದ ಇಬ್ಬರು ಸಾವು; 207 ಮಂದಿಗೆ ದೃಢ

118 ಮಂದಿ ಗುಣಮುಖ
Last Updated 31 ಆಗಸ್ಟ್ 2020, 8:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್‌ ನಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. 207 ಮಂದಿಗೆ ಸೋಂಕು ದೃಢಪಟ್ಟಿದೆ. 118 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಎನ್‌.ಆರ್‌.ಪುರದ ಅಗ್ರಹಾರದ 80 ವರ್ಷದ ಪುರುಷ (ಪಿ339432), ಬೀರೂರಿನ 65 ವರ್ಷದ ಮಹಿಳೆ (ಪಿ–296477) ಮೃತಪಟ್ಟವರು.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಕಡೂರು 69, ಚಿಕ್ಕಮಗಳೂರು 67,ತರೀಕೆರೆ 35, ಮೂಡಿಗೆರೆ 32, ಕೊಪ್ಪ 3, ಎನ್‌.ಆರ್‌.ಪುರ– ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 1164 ಸಕ್ರಿಯ ಪ್ರಕರಣಗಳು ಇವೆ. 2,599 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 72 ಮಂದಿ (ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಇಬ್ಬರು ಸಹಿತ) ಸಾವಿಗೀಡಾಗಿದ್ದಾರೆ. 1,104 ನಿಯಂತ್ರಿತ ವಲಯಗಳು ಇವೆ.

311 ಮಂದಿ ಮಾದರಿ ಸಂಗ್ರಹ

ಕೊರೊನಾ ವೈರಾಣು ಸೋಂಕು ಪರೀಕ್ಷೆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಭಾನುವಾರ 311 ಮಂದಿಯ ಗಂಟಲು ಮತ್ತು ಮೂಗಿನ ದ್ರವ ಮಾದರಿ ಸಂಗ್ರಹಿಸಲಾಗಿದೆ. ಭಾನುವಾರದ ವರದಿಯಲ್ಲಿ 334 ಮಂದಿಗೆ ನೆಗೆಟಿವ್‌ ಬಂದಿದೆ. 687 ಮಾದರಿ ಪರೀಕ್ಷೆ ವರದಿ ಬಾಕಿ ಇದೆ. 301ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು: 3951

ದಿನದ ಏರಿಕೆ: 207

ಸಕ್ರಿಯ ಪ್ರಕರಣ: 1077

ದಿನದ ಏರಿಕೆ: 87

ಗುಣಮುಖ: 2599

ದಿನದ ಏರಿಕೆ: 222

ಸಾವು: 72

ದಿನದ ಏರಿಕೆ: 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT