ವೇದ ಕಾಲದಲ್ಲಿ ಸ್ತ್ರೀಯರಿಗಿದ್ದ ಸ್ಥಾನಮಾನ ಮತ್ತು ಅವರಿಗೆ ಸಮಾಜದ ಸಂವೇದನೆ ಹೇಗಿತ್ತು ಎಂಬುದನ್ನು ಸಂಶೋಧನಾತ್ಮಕವಾಗಿ ವಿವರಿಸಿರುವ ಲೇಖಕಿ, ಗಾಂಧೀಜಿಯವರ ಮೇಲೆ ಅಧ್ಯಾತ್ಮದ ಪ್ರಭಾವವನ್ನು ಅಷ್ಟೇ ಸಮರ್ಥವಾಗಿ ನಿರೂಪಿಸಿದ್ದಾರೆ. ಈ ಪುಸ್ತಕವನ್ನು ಅವಲೋಕಿಸಿ, ಅಂದು ಮಹಿಳೆಯರ ಸ್ಥಿತಿಗತಿ ತಿಳಿಯುವ ಜೊತೆ ಇಂದಿನ ಕಾಲಮಾನಕ್ಕೆ ತುಲನೆ ಮಾಡಬಹುದು. ಸಂಸ್ಕೃತ ಭಾಷೆಯ ಸೊಗಡನ್ನು ಅರ್ಥಮಾಡಿಕೊಂಡು ಅದರಲ್ಲಿ ಕೃತಿ ರಚನೆ ಮಾಡುವುದು ಕಡಿಮೆ ಸಾಧನೆಯಲ್ಲ. ಅಂತಹ ಹೆಮ್ಮೆಯ ಸಾಧನೆ ವಿಜಯಲಕ್ಷ್ಮಿ ಅವರದು’ ಎಂದರು.