<p><strong>ಕಡೂರು</strong>: ‘ವೇದಕಾಲದಲ್ಲಿ ಸ್ತ್ರೀಯರ ಸ್ಥಾನ ಮಾನ ಹೇಗಿತ್ತು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ’ ಎಂದು ಕನ್ನಡ ಪೂಜಾರಿ ಡಾ.ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಂಗಳವಾರ ಕಡೂರು ರೋಟರಿ ಕ್ಲಬ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜ ಸಂಸ್ಕೃತ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎಚ್.ಎಸ್.ವಿಜಯಲಕ್ಷ್ಮಿ ವಿರಚಿತ ‘ವೇದಕಾಲೀನ ಸ್ತ್ರೀ’ ಹಾಗೂ ’ಗಾಂಧೀಜಿ ಮತ್ತು ಅಧ್ಯಾತ್ಮ’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>ವೇದ ಕಾಲದಲ್ಲಿ ಸ್ತ್ರೀಯರಿಗಿದ್ದ ಸ್ಥಾನಮಾನ ಮತ್ತು ಅವರಿಗೆ ಸಮಾಜದ ಸಂವೇದನೆ ಹೇಗಿತ್ತು ಎಂಬುದನ್ನು ಸಂಶೋಧನಾತ್ಮಕವಾಗಿ ವಿವರಿಸಿರುವ ಲೇಖಕಿ, ಗಾಂಧೀಜಿಯವರ ಮೇಲೆ ಅಧ್ಯಾತ್ಮದ ಪ್ರಭಾವವನ್ನು ಅಷ್ಟೇ ಸಮರ್ಥವಾಗಿ ನಿರೂಪಿಸಿದ್ದಾರೆ. ಈ ಪುಸ್ತಕವನ್ನು ಅವಲೋಕಿಸಿ, ಅಂದು ಮಹಿಳೆಯರ ಸ್ಥಿತಿಗತಿ ತಿಳಿಯುವ ಜೊತೆ ಇಂದಿನ ಕಾಲಮಾನಕ್ಕೆ ತುಲನೆ ಮಾಡಬಹುದು. ಸಂಸ್ಕೃತ ಭಾಷೆಯ ಸೊಗಡನ್ನು ಅರ್ಥಮಾಡಿಕೊಂಡು ಅದರಲ್ಲಿ ಕೃತಿ ರಚನೆ ಮಾಡುವುದು ಕಡಿಮೆ ಸಾಧನೆಯಲ್ಲ. ಅಂತಹ ಹೆಮ್ಮೆಯ ಸಾಧನೆ ವಿಜಯಲಕ್ಷ್ಮಿ ಅವರದು’ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನಲ್ಲಿ ಸೀಮಿತ ಸಂಖ್ಯೆಯ ಮಹಿಳಾ ಸಾಹಿತಿಗಳಲ್ಲಿ ತಾಲ್ಲೂಕಿನ ಪಂಚೆಹೊಸಳ್ಳಿಯ ವಿಜಯಲಕ್ಷ್ಮಿ ಅವರ ಸಾಧನೆ ಬಹುದೊಡ್ಡದು ಎಂದರು.</p>.<p>ಲೇಖಕಿ ಡಾ.ವಿಜಯಲಕ್ಷ್ಮಿ ಮಾತನಾಡಿ, ‘ಮೈಸೂರಿನಂಥ ಸಾಂಸ್ಕೃತಿಕ ನಗರದಲ್ಲಿದ್ದರೂ, ಮೂಲನೆಲದ ತಾಲ್ಲೂಕಿನಲ್ಲಿ ಪುಸ್ತಕಗಳು ಹೊರಬಂದಿರುವುದು ಸಂತಸ ತಂದಿದೆ. ಸಂಸ್ಕೃತ ಭಾಷೆಯ ಹಿರಿಮೆಯನ್ನು ಸಾರುವುದು ನನ್ನ ನಿರಂತರ ಕಾಯಕ’ ಎಂದರು.</p>.<p>ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಯುವರಾಜ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ.ವೈ.ಸಿ.ನಂಜುಂಡಯ್ಯ ಉದ್ಘಾಟಿಸಿದರು. ಲಕ್ಚ್ಮೀಶ್ ಪಿ.ಶಿರಹಟ್ಟಿ, ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಬಿ.ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು</strong>: ‘ವೇದಕಾಲದಲ್ಲಿ ಸ್ತ್ರೀಯರ ಸ್ಥಾನ ಮಾನ ಹೇಗಿತ್ತು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ’ ಎಂದು ಕನ್ನಡ ಪೂಜಾರಿ ಡಾ.ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಂಗಳವಾರ ಕಡೂರು ರೋಟರಿ ಕ್ಲಬ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜ ಸಂಸ್ಕೃತ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎಚ್.ಎಸ್.ವಿಜಯಲಕ್ಷ್ಮಿ ವಿರಚಿತ ‘ವೇದಕಾಲೀನ ಸ್ತ್ರೀ’ ಹಾಗೂ ’ಗಾಂಧೀಜಿ ಮತ್ತು ಅಧ್ಯಾತ್ಮ’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>ವೇದ ಕಾಲದಲ್ಲಿ ಸ್ತ್ರೀಯರಿಗಿದ್ದ ಸ್ಥಾನಮಾನ ಮತ್ತು ಅವರಿಗೆ ಸಮಾಜದ ಸಂವೇದನೆ ಹೇಗಿತ್ತು ಎಂಬುದನ್ನು ಸಂಶೋಧನಾತ್ಮಕವಾಗಿ ವಿವರಿಸಿರುವ ಲೇಖಕಿ, ಗಾಂಧೀಜಿಯವರ ಮೇಲೆ ಅಧ್ಯಾತ್ಮದ ಪ್ರಭಾವವನ್ನು ಅಷ್ಟೇ ಸಮರ್ಥವಾಗಿ ನಿರೂಪಿಸಿದ್ದಾರೆ. ಈ ಪುಸ್ತಕವನ್ನು ಅವಲೋಕಿಸಿ, ಅಂದು ಮಹಿಳೆಯರ ಸ್ಥಿತಿಗತಿ ತಿಳಿಯುವ ಜೊತೆ ಇಂದಿನ ಕಾಲಮಾನಕ್ಕೆ ತುಲನೆ ಮಾಡಬಹುದು. ಸಂಸ್ಕೃತ ಭಾಷೆಯ ಸೊಗಡನ್ನು ಅರ್ಥಮಾಡಿಕೊಂಡು ಅದರಲ್ಲಿ ಕೃತಿ ರಚನೆ ಮಾಡುವುದು ಕಡಿಮೆ ಸಾಧನೆಯಲ್ಲ. ಅಂತಹ ಹೆಮ್ಮೆಯ ಸಾಧನೆ ವಿಜಯಲಕ್ಷ್ಮಿ ಅವರದು’ ಎಂದರು.</p>.<p>ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನಲ್ಲಿ ಸೀಮಿತ ಸಂಖ್ಯೆಯ ಮಹಿಳಾ ಸಾಹಿತಿಗಳಲ್ಲಿ ತಾಲ್ಲೂಕಿನ ಪಂಚೆಹೊಸಳ್ಳಿಯ ವಿಜಯಲಕ್ಷ್ಮಿ ಅವರ ಸಾಧನೆ ಬಹುದೊಡ್ಡದು ಎಂದರು.</p>.<p>ಲೇಖಕಿ ಡಾ.ವಿಜಯಲಕ್ಷ್ಮಿ ಮಾತನಾಡಿ, ‘ಮೈಸೂರಿನಂಥ ಸಾಂಸ್ಕೃತಿಕ ನಗರದಲ್ಲಿದ್ದರೂ, ಮೂಲನೆಲದ ತಾಲ್ಲೂಕಿನಲ್ಲಿ ಪುಸ್ತಕಗಳು ಹೊರಬಂದಿರುವುದು ಸಂತಸ ತಂದಿದೆ. ಸಂಸ್ಕೃತ ಭಾಷೆಯ ಹಿರಿಮೆಯನ್ನು ಸಾರುವುದು ನನ್ನ ನಿರಂತರ ಕಾಯಕ’ ಎಂದರು.</p>.<p>ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಯುವರಾಜ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ.ವೈ.ಸಿ.ನಂಜುಂಡಯ್ಯ ಉದ್ಘಾಟಿಸಿದರು. ಲಕ್ಚ್ಮೀಶ್ ಪಿ.ಶಿರಹಟ್ಟಿ, ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಬಿ.ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>