ನಗರಸಭೆ ಅಧ್ಯಕ್ಷನಾಗಿದ್ದಾಗ ಪ್ರತಿಮೆ ನಿರ್ಮಾಣ ವಿಚಾರ ಚಿಗುರೊಡೆದು, ಕೆಲ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮತ್ತು ಕೈಯಿಂದಲೂ ಹಣ ಹಾಕಿ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಶಿವಮೊಗ್ಗದ ಕಲಾವಿದರೊಬ್ಬರಿಗೆ ವಹಿಸಲು ಮುಂದಾಗಿದ್ದೆವು. ಮಾತುಕತೆ ಯನ್ನೂ ಮಾಡಿದ್ದೆವು. ಆದರೆ, ರವೀಂದ್ರ ಪ್ರಭು ಅವರ ಒತ್ತಡದ ಮೇರೆಗೆ ಸ್ಥಳೀಯ ಕಲಾವಿದ ಏಕಾಂತರಾಮು ಅವರಿಗೆ ವಹಿಸಲಾಯಿತು. ಅವರು ಪ್ರತಿಮೆ ಸರಿಯಾಗಿ ರೂಪಿಸಲಿಲ್ಲ. ಪ್ರತಿಮೆಯ ವಿರೂಪ ಸರಿಪಡಿಸಲು ಬೆಂಗಳೂರಿನ ಮಧುಸೂದನ್ ಎಂಬುವರಿಗೆ ವಹಿಸಲಾಯಿತು. ಆತ ಹಣ ಪಡೆದು ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.