ಮೂಡಿಗೆರೆ(ಚಿಕ್ಕಮಗಳೂರು): ತಾಲ್ಲೂಕಿನ ಹೇರಿಕೆ ಗ್ರಾಮದಲ್ಲಿ ಕಾಡಾನೆಯೊಂದು ಮನೆಯ ಪಕ್ಕದ ಶೆಡ್ಗೆ ಕಾಡಾನೆಯೊಂದು ನುಗ್ಗಿ ಕಾರಿನ ಗಾಜು ಪುಡಿಗೊಳಿಸಿದೆ.
ಮಹೇಶ್ ಎಂಬುವರಿಗೆ ಸೇರಿದ ಕಾರಿನ ಹಿಂಬದಿಯ ಗಾಜನ್ನು ಕಾಡಾನೆ ಒಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಆನೆ ಕಾರ್ಯಪಡೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಊರಿನೊಳಗೆ ಬರುತ್ತಿರುವ ಕಾಡಾನೆ ಹಾವಳಿ ನಿಯಂತ್ರಿಸಬೇಕು. ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು