<p><strong>ತರೀಕೆರೆ:</strong> ಲಕ್ಷ್ಮಣ್ ಅವರು ಹಿಂದುಳಿದ ವರ್ಗದ ಶಕ್ತಿಯಾಗಿದ್ದರು ಎಂದು ಕನಕ ಗುರುಪೀಠ, ಹೊಸದುರ್ಗ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ತಿಳಿಸಿದರು.<br /> <br /> ಪಟ್ಟಣದ ಶಾರದಾ ಸಭಾಭವನದಲ್ಲಿ ಶುಕ್ರವಾರ ನಡೆದ ಸಹಕಾರಿ ಧುರಿಣ ಟಿ.ಎಚ್. ಲಕ್ಷ್ಮಣ್ ಒಂದು ನೆನಪು ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.<br /> <br /> ಹಣ ಮತ್ತು ಜಾತಿ ರಾಜಕಾರಣದಿಂದ ದೂರವಿದ್ದಾಗ ಮಾತ್ರ ವ್ಯಕ್ತಿ ಉನ್ನತ ಹಂತಕ್ಕೆ ಏರಲು ಸಾಧ್ಯ ಎಂದರು.<br /> <br /> ಮ್ಯೋಮ್ಕೋಸ್ ಉಪಾಧ್ಯಕ್ಷ ನರಸಿಂಹನಾಯ್ಕ ಮಾತನಾಡಿ, ರೈತರ ಕಷ್ಟ ನಷ್ಟಗಳಿಗೆ ತಕ್ಷಣವೇ ಸ್ಪಂದಿಸುವ ಮನೋಧರ್ಮ ಲಕ್ಷ್ಮಣ್ ಅವರದ್ದಾಗಿತ್ತು ಎಂದು ತಿಳಿಸಿದರು.<br /> <br /> ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ ರಾಜಕೀಯ ದೃಢತೆಯೊಂದಿಗೆ ಸಾಹಿತ್ಯ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.<br /> <br /> ಈ ಸಂದರ್ಭದಲ್ಲಿ ಟಿ.ಎಚ್.ಲಕ್ಷ್ಮಣ್ ಕುರಿತ ಸ್ಮರಣ ಸಂಚಿಕೆ ಬಿಡುಗಡೆಮಾಡಲಾಯಿತು.<br /> <br /> ಮಾಜಿ ಸಚಿವ ಎಚ್.ಆರ್. ರಾಜು, ಮಾಜಿ ಶಾಸಕರಾದ ಬಿ.ಆರ್. ನೀಲಕಂಠಪ್ಪ, ಎಸ್. ಎಂ. ನಾಗರಾಜ್ , ಟಿ.ಎಚ್. ಶಿವಶಂಕರಪ್ಪ, ಎಸ್.ಎಲ್. ಧರ್ಮೇಗೌಡ, ಮುಖಂಡರಾದ ಟಿ.ವಿ.ಶಿವಶಂಕರಪ್ಪ, ಟಿ.ಎನ್. ಗೋಪಿನಾಥ್, ಎನ್. ಮಂಜುನಾಥ, ಆರ್. ದೇವಾನಂದ್, ನಾಗಭೂಷಣ್, ಅನಂತನಾಡಿಗ್, ಶಿವಣ್ಣ, ತಿಪ್ಪೇರುದ್ರಪ್ಪ, ಟಿ.ಆರ್. ನಾಗರಾಜ್ , ಟಿ.ಎಚ್. ಲಕ್ಷ್ಮಣ್ ಪತ್ನಿ ಪಾರ್ವತಮ್ಮ, ಪುತ್ರ ಟಿ.ಎಲ್. ರಮೇಶ್, ಟಿ.ಎಲ್. ಪ್ರಕಾಶ್, ಟಿ.ಎಲ್. ಸುರೇಶ್, ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತರೀಕೆರೆ:</strong> ಲಕ್ಷ್ಮಣ್ ಅವರು ಹಿಂದುಳಿದ ವರ್ಗದ ಶಕ್ತಿಯಾಗಿದ್ದರು ಎಂದು ಕನಕ ಗುರುಪೀಠ, ಹೊಸದುರ್ಗ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ತಿಳಿಸಿದರು.<br /> <br /> ಪಟ್ಟಣದ ಶಾರದಾ ಸಭಾಭವನದಲ್ಲಿ ಶುಕ್ರವಾರ ನಡೆದ ಸಹಕಾರಿ ಧುರಿಣ ಟಿ.ಎಚ್. ಲಕ್ಷ್ಮಣ್ ಒಂದು ನೆನಪು ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.<br /> <br /> ಹಣ ಮತ್ತು ಜಾತಿ ರಾಜಕಾರಣದಿಂದ ದೂರವಿದ್ದಾಗ ಮಾತ್ರ ವ್ಯಕ್ತಿ ಉನ್ನತ ಹಂತಕ್ಕೆ ಏರಲು ಸಾಧ್ಯ ಎಂದರು.<br /> <br /> ಮ್ಯೋಮ್ಕೋಸ್ ಉಪಾಧ್ಯಕ್ಷ ನರಸಿಂಹನಾಯ್ಕ ಮಾತನಾಡಿ, ರೈತರ ಕಷ್ಟ ನಷ್ಟಗಳಿಗೆ ತಕ್ಷಣವೇ ಸ್ಪಂದಿಸುವ ಮನೋಧರ್ಮ ಲಕ್ಷ್ಮಣ್ ಅವರದ್ದಾಗಿತ್ತು ಎಂದು ತಿಳಿಸಿದರು.<br /> <br /> ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ ರಾಜಕೀಯ ದೃಢತೆಯೊಂದಿಗೆ ಸಾಹಿತ್ಯ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.<br /> <br /> ಈ ಸಂದರ್ಭದಲ್ಲಿ ಟಿ.ಎಚ್.ಲಕ್ಷ್ಮಣ್ ಕುರಿತ ಸ್ಮರಣ ಸಂಚಿಕೆ ಬಿಡುಗಡೆಮಾಡಲಾಯಿತು.<br /> <br /> ಮಾಜಿ ಸಚಿವ ಎಚ್.ಆರ್. ರಾಜು, ಮಾಜಿ ಶಾಸಕರಾದ ಬಿ.ಆರ್. ನೀಲಕಂಠಪ್ಪ, ಎಸ್. ಎಂ. ನಾಗರಾಜ್ , ಟಿ.ಎಚ್. ಶಿವಶಂಕರಪ್ಪ, ಎಸ್.ಎಲ್. ಧರ್ಮೇಗೌಡ, ಮುಖಂಡರಾದ ಟಿ.ವಿ.ಶಿವಶಂಕರಪ್ಪ, ಟಿ.ಎನ್. ಗೋಪಿನಾಥ್, ಎನ್. ಮಂಜುನಾಥ, ಆರ್. ದೇವಾನಂದ್, ನಾಗಭೂಷಣ್, ಅನಂತನಾಡಿಗ್, ಶಿವಣ್ಣ, ತಿಪ್ಪೇರುದ್ರಪ್ಪ, ಟಿ.ಆರ್. ನಾಗರಾಜ್ , ಟಿ.ಎಚ್. ಲಕ್ಷ್ಮಣ್ ಪತ್ನಿ ಪಾರ್ವತಮ್ಮ, ಪುತ್ರ ಟಿ.ಎಲ್. ರಮೇಶ್, ಟಿ.ಎಲ್. ಪ್ರಕಾಶ್, ಟಿ.ಎಲ್. ಸುರೇಶ್, ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>