<p>ತರೀಕೆರೆ: ಪಟ್ಟಣದ ಸರ್ವಾಂಗಿಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರಸ್ತುತ ಸಾಲಿನಲ್ಲಿ ಮುಕ್ತ ನಿಧಿಯಲ್ಲಿ ರೂ 2.74 ಕೋಟಿ ಹಣವನ್ನು ಬಿಡುಗಡೆ ಮಾಡಿದೆ ಎಂದು ಪುರಸಭಾಧ್ಯಕ್ಷೆ ಪಾರ್ವತಮ್ಮ ನಾಗರಾಜ್ ತಿಳಿಸಿದರು.<br /> <br /> ಇಲ್ಲಿನ ಪುರಸಭಾ ಸಭಾಂಗಣದಲ್ಲಿ ಬುಧವಾರ ನಡೆದ ತುರ್ತು ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಹಿಂದಿನ ಸಾಲಿನಲ್ಲಿ ಕೈಗೊಂಡ ಎಸ್ಎಫ್ಸಿ ಮುಕ್ತನಿಧಿಯ ಮುಂದುವರಿದ ಕಾಮಗಾರಿಗಳಿಗೆ ಪ್ರಸ್ತುತ ಯೋಜನೆಯಿಂದ ರೂ 14.62 ಲಕ್ಷ ಹಣವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.<br /> <br /> ರೂ 55.80 ಲಕ್ಷ ಹಣವನ್ನು ಇತರೆ ಕಾಮ ಗಾರಿಗಳಿಗೆ, ರೂ 17.78 ಲಕ್ಷ ಹಣವನ್ನು ಬಡಜನರ ಕಲ್ಯಾಣಕ್ಕಾಗಿ, ರೂ 15 ಲಕ್ಷಹಣವನ್ನು ಪರಿಶಿಷ್ಟರ ಅಭಿವೃದ್ಧಿಗಾಗಿ, ರೂ 7.34 ಲಕ್ಷಹಣವನ್ನು ಕುಡಿಯುವ ನೀರಿನ ಯೋಜನೆಗೆ ಮೀಸಲಿರಿ ಸುವುದಾಗಿ ಅವರು ತಿಳಿಸಿದರು.<br /> <br /> ಚಿಕ್ಕ ಪ್ರಮಾಣದ ಮಾರುಕಟ್ಟೆ, ಶೌಚಾಲಯ ನಿರ್ಮಾಣ, ಒಳ ಭಾಗದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಮತ್ತು ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತಂತೆ ಕ್ರಿಯಾ ಯೋಜನೆಯನ್ನು ಪುರಸಭೆ ತಯಾರಿಸಿದೆ ಎಂದ ಅವರು, ಈ ಎಲ್ಲಾ ಕಾಮಗಾರಿಗಳಿಗೆ ಸಭೆಯು ಒಮ್ಮತದ ಅನುಮೋದನೆ ನೀಡಿದೆ ಎಂದರು. <br /> <br /> ಪುರಸಭೆಯ ಉಪಾಧ್ಯಕ್ಷೆ ಮಂಜುಳ ಪುರುಷೋತ್ತಮ್, ಸದಸ್ಯರಾದ ಹೇಮಲತಾ, ನರೇಂದ್ರ, ಪ್ರಕಾಶ್, ಜಿಯಾವುಲ್ಲಾ ಮತ್ತು ಮುಖ್ಯಾಧಿಕಾರಿ ಸತ್ಯನಾರಾಯಣ್ ಮುಂತಾದವರು ಸಭೆಯಲ್ಲಿ ಭಾಗವಹಿಸಿ ಪಟ್ಟಣದ ಅಭಿವೃದ್ಧಿಗೆ ಸಲಹೆಗಳನ್ನು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತರೀಕೆರೆ: ಪಟ್ಟಣದ ಸರ್ವಾಂಗಿಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರಸ್ತುತ ಸಾಲಿನಲ್ಲಿ ಮುಕ್ತ ನಿಧಿಯಲ್ಲಿ ರೂ 2.74 ಕೋಟಿ ಹಣವನ್ನು ಬಿಡುಗಡೆ ಮಾಡಿದೆ ಎಂದು ಪುರಸಭಾಧ್ಯಕ್ಷೆ ಪಾರ್ವತಮ್ಮ ನಾಗರಾಜ್ ತಿಳಿಸಿದರು.<br /> <br /> ಇಲ್ಲಿನ ಪುರಸಭಾ ಸಭಾಂಗಣದಲ್ಲಿ ಬುಧವಾರ ನಡೆದ ತುರ್ತು ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಹಿಂದಿನ ಸಾಲಿನಲ್ಲಿ ಕೈಗೊಂಡ ಎಸ್ಎಫ್ಸಿ ಮುಕ್ತನಿಧಿಯ ಮುಂದುವರಿದ ಕಾಮಗಾರಿಗಳಿಗೆ ಪ್ರಸ್ತುತ ಯೋಜನೆಯಿಂದ ರೂ 14.62 ಲಕ್ಷ ಹಣವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.<br /> <br /> ರೂ 55.80 ಲಕ್ಷ ಹಣವನ್ನು ಇತರೆ ಕಾಮ ಗಾರಿಗಳಿಗೆ, ರೂ 17.78 ಲಕ್ಷ ಹಣವನ್ನು ಬಡಜನರ ಕಲ್ಯಾಣಕ್ಕಾಗಿ, ರೂ 15 ಲಕ್ಷಹಣವನ್ನು ಪರಿಶಿಷ್ಟರ ಅಭಿವೃದ್ಧಿಗಾಗಿ, ರೂ 7.34 ಲಕ್ಷಹಣವನ್ನು ಕುಡಿಯುವ ನೀರಿನ ಯೋಜನೆಗೆ ಮೀಸಲಿರಿ ಸುವುದಾಗಿ ಅವರು ತಿಳಿಸಿದರು.<br /> <br /> ಚಿಕ್ಕ ಪ್ರಮಾಣದ ಮಾರುಕಟ್ಟೆ, ಶೌಚಾಲಯ ನಿರ್ಮಾಣ, ಒಳ ಭಾಗದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಮತ್ತು ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತಂತೆ ಕ್ರಿಯಾ ಯೋಜನೆಯನ್ನು ಪುರಸಭೆ ತಯಾರಿಸಿದೆ ಎಂದ ಅವರು, ಈ ಎಲ್ಲಾ ಕಾಮಗಾರಿಗಳಿಗೆ ಸಭೆಯು ಒಮ್ಮತದ ಅನುಮೋದನೆ ನೀಡಿದೆ ಎಂದರು. <br /> <br /> ಪುರಸಭೆಯ ಉಪಾಧ್ಯಕ್ಷೆ ಮಂಜುಳ ಪುರುಷೋತ್ತಮ್, ಸದಸ್ಯರಾದ ಹೇಮಲತಾ, ನರೇಂದ್ರ, ಪ್ರಕಾಶ್, ಜಿಯಾವುಲ್ಲಾ ಮತ್ತು ಮುಖ್ಯಾಧಿಕಾರಿ ಸತ್ಯನಾರಾಯಣ್ ಮುಂತಾದವರು ಸಭೆಯಲ್ಲಿ ಭಾಗವಹಿಸಿ ಪಟ್ಟಣದ ಅಭಿವೃದ್ಧಿಗೆ ಸಲಹೆಗಳನ್ನು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>