<p><strong>ಚಳ್ಳಕೆರೆ:</strong> ಕೊರೊನಾ ಸೋಂಕಿತರಿಗೆ ಆಮ್ಲಜನಕದ ಕೊರತೆ ಉಂಟಾಗದಂತೆ ತಡೆಯಲು ಭಾನುವಾರ ಪೊಲೀಸರು, ನಗರದ ವಿವಿಧ ಗ್ಯಾರೇಜ್ಗಳಿಗೆ ಭೇಟಿ ನೀಡಿ 20 ಖಾಲಿ ಸಿಲಿಂಡರ್ಗಳನ್ನು ಸಂಗ್ರಹಿಸಿದರು.</p>.<p>ಪಿಎಸ್ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ‘ಆಮ್ಲಜನಕದ ಅಭಾವದಿಂದ ಸೋಂಕಿತರ ಸಾವಿನ ಪ್ರಕರಣಗಳು ದಿನ ದಿನಕ್ಕೂ ಹೆಚ್ಚುತ್ತಿವೆ. ಗ್ಯಾಸ್ ಪ್ಲಾಂಟ್ಗಳಲ್ಲಿ ಆಮ್ಲಜನಕ ದೊರೆತರೂ ಅದನ್ನು ತುಂಬಿಸಲು ಸಿಲಿಂಡರ್ಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಇದರಿಂದ ಸೋಂಕಿತರಿಗೆ ಸಕಾಲದಲ್ಲಿ ಆಮ್ಲಜನಕ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ’<br />ಎಂದರು.</p>.<p>ಸಂಗ್ರಹಿಸಿರುವ 20 ಖಾಲಿ ಸಿಲಿಂಡರ್ಗಳನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಒಪ್ಪಿಸಲಾಗುವುದು. ಮನೆ, ಅಂಗಡಿ ಹಾಗೂ ಸಂಘ–ಸಂಸ್ಥೆಯಲ್ಲಿ ಖಾಲಿ ಸಿಲಿಂಡರ್ ಹೆಚ್ಚುವರಿಯಾಗಿ ಇದ್ದಲ್ಲಿ ಕೂಡಲೇ ಇಲಾಖೆಯ ಗಮನಕ್ಕೆ ತರುವುದರ ಮೂಲಕ ಸೋಂಕಿತರಿಗೆ ನೆರವಾಗಬೇಕು ಎಂದು ಅವರು ಮನವಿ ಮಾಡಿದರು.</p>.<p>ಗ್ಯಾರೇಜ್ ಮಾಲೀಕ, ಖಲಿಉಲ್ಲಾ, ಮಂಜುನಾಥ್, ರಂಗಸ್ವಾಮಿ, ವೆಂಕಟೇಶ್, ಅನಿಫ್, ಸುಬಾನುಲ್ಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ:</strong> ಕೊರೊನಾ ಸೋಂಕಿತರಿಗೆ ಆಮ್ಲಜನಕದ ಕೊರತೆ ಉಂಟಾಗದಂತೆ ತಡೆಯಲು ಭಾನುವಾರ ಪೊಲೀಸರು, ನಗರದ ವಿವಿಧ ಗ್ಯಾರೇಜ್ಗಳಿಗೆ ಭೇಟಿ ನೀಡಿ 20 ಖಾಲಿ ಸಿಲಿಂಡರ್ಗಳನ್ನು ಸಂಗ್ರಹಿಸಿದರು.</p>.<p>ಪಿಎಸ್ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ‘ಆಮ್ಲಜನಕದ ಅಭಾವದಿಂದ ಸೋಂಕಿತರ ಸಾವಿನ ಪ್ರಕರಣಗಳು ದಿನ ದಿನಕ್ಕೂ ಹೆಚ್ಚುತ್ತಿವೆ. ಗ್ಯಾಸ್ ಪ್ಲಾಂಟ್ಗಳಲ್ಲಿ ಆಮ್ಲಜನಕ ದೊರೆತರೂ ಅದನ್ನು ತುಂಬಿಸಲು ಸಿಲಿಂಡರ್ಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಇದರಿಂದ ಸೋಂಕಿತರಿಗೆ ಸಕಾಲದಲ್ಲಿ ಆಮ್ಲಜನಕ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ’<br />ಎಂದರು.</p>.<p>ಸಂಗ್ರಹಿಸಿರುವ 20 ಖಾಲಿ ಸಿಲಿಂಡರ್ಗಳನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಒಪ್ಪಿಸಲಾಗುವುದು. ಮನೆ, ಅಂಗಡಿ ಹಾಗೂ ಸಂಘ–ಸಂಸ್ಥೆಯಲ್ಲಿ ಖಾಲಿ ಸಿಲಿಂಡರ್ ಹೆಚ್ಚುವರಿಯಾಗಿ ಇದ್ದಲ್ಲಿ ಕೂಡಲೇ ಇಲಾಖೆಯ ಗಮನಕ್ಕೆ ತರುವುದರ ಮೂಲಕ ಸೋಂಕಿತರಿಗೆ ನೆರವಾಗಬೇಕು ಎಂದು ಅವರು ಮನವಿ ಮಾಡಿದರು.</p>.<p>ಗ್ಯಾರೇಜ್ ಮಾಲೀಕ, ಖಲಿಉಲ್ಲಾ, ಮಂಜುನಾಥ್, ರಂಗಸ್ವಾಮಿ, ವೆಂಕಟೇಶ್, ಅನಿಫ್, ಸುಬಾನುಲ್ಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>