‘ನಿತ್ಯ ನೂರು ಕಿ.ಮೀ. ಕ್ರಮಿಸುತ್ತ ಮೊದಲು ಹೈದರಾಬಾದ್ ತಲುಪಿದೆ. ಆಕಸ್ಮಿಕ ಎಂಬಂತೆ ಅಲ್ಲಿಂದ ರಾಷ್ಟ್ರೀಯ ಮಟ್ಟದ ಸೈಕಲ್ ಕ್ರೀಡಾಪಟು ಎಂ. ವರಪ್ರಸಾದ್ ಜೊತೆಗೂಡಿದ ನಂತರ ಕೇವಲ 18 ದಿನದಲ್ಲಿ 2000 ಕಿ.ಮೀ. ಕ್ರಮಿಸಿ ಏ.30 ರಂದು ಬೆಳಿಗ್ಗೆ 10.30ಕ್ಕೆ ಅಯೋಧ್ಯೆ ತಲುಪಿದೆವು. ವರಪ್ರಸಾದ್ ಇದ್ದ ಕಾರಣಕ್ಕೆ ಭಾಷೆಯ ಸಮಸ್ಯೆ ಆಗಲಿಲ್ಲ. ಕೂಡ್ಲಿಗಿ, ಅಂಜನಾದ್ರಿ, ಗಂಗಾವತಿ, ಕಾರಟಗಿಗಳಲ್ಲಿ ‘ಭಾರತ ಕೊರೊನಾ ಮುಕ್ತವಾಗಬೇಕು, ದೇಶದ ಜನರು ಪ್ರಾಮಾಣಿಕರಾಗಬೇಕು, ಎಲ್ಲ ದೇಶವಾಸಿಗಳಿಗೆ ಪೌಷ್ಟಿಕ ಆಹಾರ ದೊರಕಬೇಕು. ಜೀವಜಲ ಉಳಿವಿಗೆ ಎಲ್ಲರು ಶ್ರಮಿಸಬೇಕು. ಯುವಕರು ರಾಮಭಕ್ತಿಯೇ ಶಕ್ತಿ ಎಂಬುದನ್ನು ಅರಿಯಬೇಕು’ ಎಂಬ ನಮ್ಮ ಯಾತ್ರೆಯ ಉದ್ದೇಶ ಕುರಿತ ಜಾಗೃತಿ ಸಭೆಗಳನ್ನು ನಡೆಸಿದ್ದೆವು. ಬಳಿಕ ಕೋವಿಡ್ ಕಾರಣದಿಂದ ಸಭೆಗಳನ್ನು ನಡೆಸಲು ಆಗಲಿಲ್ಲ’ ಎಂದು ಹೇಳಿದರು.