‘ನಾನು ಎಸ್ಸೆಸ್ಸೆಲ್ಸಿವರೆಗೆ ಶಿವಮೊಗ್ಗದಲ್ಲೇ ಓದಿದ್ದೆ. ಪಿಯುಸಿಗೆ ದಾವಣಗೆರೆಯ ಸರ್ ಎಂ.ವಿ.ಕಾಲೇಜಿಗೆ ಸೇರಿದೆ. ಪರೀಕ್ಷೆಗೂ ಮೊದಲು 700 ಅಂಕ ಪಡೆಯುವ ಗುರಿಯೊಂದಿಗೆ ಓದಿದ್ದೆ. ಆದರೆ, ಪ್ರಶ್ನೆಗಳಲ್ಲಿ ಆದ ಗೊಂದಲದಿಂದ 672 ಅಂಕ ಪಡೆಯಲು ಸಾಧ್ಯವಾಯಿತು. ಶಿಕ್ಷಕರ ಮಾರ್ಗದರ್ಶನದಂತೆ ತರಬೇತಿ ಪಡೆಯುತ್ತಿದ್ದೆ. ಕೊರೊನಾದಿಂದ ದ್ವಿತೀಯ ಪಿಯುಸಿಯ ಮಧ್ಯದಲ್ಲಿ ಕೇವಲ ಮೂರು ತಿಂಗಳಷ್ಟೇ ಕಾಲೇಜು ನಡೆಯಿತು. ಉಳಿದಂತೆ ಎರಡು ವರ್ಷವೂ ಆನ್ಲೈನ್ ಕ್ಲಾಸ್ ನಡೆಸುತ್ತಿದ್ದರು. ಮನೆಯಲ್ಲಿ ಕುಳಿತು ಶ್ರದ್ಧೆಯಿಂದ ಆನ್ಲೈನ್ ತರಗತಿ ಆಲಿಸುತ್ತಿದ್ದೆ. ಮುಖ್ಯಾಂಶಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದೆ. ದಿನಕ್ಕೆ 6ರಿಂದ 8 ಗಂಟೆ ಅಧ್ಯಯನ ಮಾಡುತ್ತಿದ್ದೆ’ ಎಂದು ವಿವರಿಸಿದರು ಸ್ವಾಗತ್.