ಹೊಳಲ್ಕೆರೆ: ತಾಲ್ಲೂಕಿನ ತಾಳ್ಯ ಗ್ರಾಮ ಪಂಚಾಯಿತಿ ಪಿಡಿಒ ಸಿ. ಪ್ರದೀಪ್ ಕುಮಾರ್ ಬುಧವಾರ ₹ 2,000 ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನೇರಲಕಟ್ಟೆ ಗ್ರಾಮದ ಮೂರ್ತಪ್ಪ ಎಂಬುವರಿಗೆ ನಿವೇಶನದ ಇ–ಸ್ವತ್ತು ಮಾಡಿಕೊಡಲು ಪಿಡಿಒ ₹ 2,000 ಲಂಚ ಕೊಡುವಂತೆ ಒತ್ತಾಯಿಸಿದ್ದರು.ಮೂರ್ತಪ್ಪ ಈ ಬಗ್ಗೆ ಎಸಿಬಿ ಠಾಣೆಗೆ ದೂರು ನೀಡಿದ್ದರು.
ತಾಳ್ಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಎಸಿಬಿಗೆ ಸಿಕ್ಕಿ ಬಿದ್ದಿದ್ದಾರೆ.
ಡಿಎಸ್ಪಿ ಬಸವರಾಜ್ ಮಗದುಮ್, ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್, ಪ್ರವೀಣಕುಮಾರ್, ಆಂಜನೇಯ, ಶ್ರೀನಿವಾಸ್, ಮಾರುತಿರಾಮ್, ಯತಿರಾಜ್, ಫಕ್ರುದ್ದೀನ್, ಓಬಣ್ಣ, ಹರೀಶ್, ಫಯಾಜ್, ಶ್ರೀಪತಿ, ಪ್ರಭಾಕರ್ ಹಾಗೂ ಯೂನಸ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡಿತ್ತು.