ಸಂಘದ ತಾಲ್ಲೂಕು ಅಧ್ಯಕ್ಷ ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಗಣರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಪ್ರಗತಿಪರ ರೈತ ರಾವಲಕುಂಟೆಯ ರಮೇಶ್ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಮುಖಂಡರಾದ ತಿಪ್ಪೀರಯ್ಯನಹಟ್ಟಿ ಚಂದ್ರಣ್ಣ, ನಾಗರಾಜ್, ಡಿ.ಬಿ. ಕೃಷ್ಣಮೂರ್ತಿ, ಡಿ.ಚಂದ್ರಶೇಖರ ನಾಯಕ, ಹನುಮಂತಪ್ಪ, ಕೆ.ಚಂದ್ರಣ್ಣ, ಎನ್.ಈಶ್ವರರೆಡ್ಡಿ, ಮೇಸ್ತ್ರಿ ಪಾಪಯ್ಯ, ಕನಕ ಶಿವಮೂರ್ತಿ ಇದ್ದರು.