<p><strong>ಚಿತ್ರದುರ್ಗ:</strong> ‘ಶಿವರಾತ್ರಿ ಎಂದರೆ ಸದಾ ಎಚ್ಚರದಿಂದಿದ್ದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ, ನಮ್ಮಲ್ಲಿರುವ ಅರಿವನ್ನು ಜಾಗೃತ ಮತ್ತು ಆತ್ಮನಿವೇದನೆ ಮಾಡಿಕೊಳ್ಳುವ ರಾತ್ರಿಯಾಗಿದೆ’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.</p>.<p>ನಗರದ ಮುರುಘಾ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ನಡೆದ ಶಿವರಾತ್ರಿ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ದೇಹವೆಂಬ ತುಂಬಿದ ಬಂಡಿಯನ್ನು ನಡೆಸುವುದು ಪಂಚೇಂದ್ರಿಯಗಳು. ಅವುಗಳನ್ನು ನಮ್ಮ ಹಿಡಿತದಲ್ಲಿಟ್ಟಕೊಳ್ಳಬೇಕು. ಇದನ್ನೇ ನಮ್ಮ ಶರಣರು ಅವಧಾನ ಭಕ್ತಿ ಎಂದಿದ್ದಾರೆ. ಆಧ್ಯಾತ್ಮ ದೃಷ್ಟಿಯಲ್ಲಿ ಆಸೆ ಪಡುವುದು ತಪ್ಪಲ್ಲ, ಆದರೆ ಸಿಕ್ಕಿರುವುದರಲ್ಲೇ ತೃಪ್ತಿ ಪಡುವಂತೆ ಇರಬೇಕು’ ಎಂದು ಸಲಹೆ ನೀಡಿದರು.</p>.<p>‘ಮಾತನಾಡುವ ದೇವರು ನಡೆದಾಡುವ ದೇವಾಲಯ ಯಾರು ಅಂದರೆ ಅದುವೇ ಮಾನವ. ಆದ್ದರಿಂದಲೇ ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನನ್ನು ಮಹಾದೇವನನ್ನಾಗಿ ಮಾಡಿದವರು ನಮ್ಮ ಶರಣರು’ ಎಂದು ತಿಳಿಸಿದರು.</p>.<p>‘ಪ್ರಸ್ತುತ ದಿನಗಳಲ್ಲಿ ಶಿವತತ್ವದ ಅನಿವಾರ್ಯತೆ ಇದೆ. ಸಮಾಜದಲ್ಲಿ ಬದುಕುವ ಮನುಷ್ಯನಿಗೆ ಶಾಂತಿ ಮತ್ತು ಧ್ಯಾನದ ಅವಶ್ಯಕತೆಯಿದೆ. ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಆಚರಣೆಗೂ ಧಾರ್ಮಿಕ ಹಿನ್ನಲೆ ಜೊತೆಗೆ ವೈಚಾರಿಕ ಸ್ಪರ್ಶವಿದೆ’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಹೇಳಿದರು.</p>.<p>‘ಉಪವಾಸ, ಜಾಗರಣೆ, ಅಭಿಷೇಕ ಮತ್ತು ಬಿಲ್ವಾರ್ಚನೆ ಇವು ಶಿವನನ್ನು ಪೂಜಿಸುವ ನೆಪದಲ್ಲಿ ಮನುಷ್ಯನ ಅರೋಗ್ಯದ ಗುಟ್ಟನ್ನು ಒಳಗೊಂಡಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರುವ ಶಿವರಾತ್ರಿ ಸಮಾಜದಲ್ಲಿ ಸಮಾನತೆ ಸಂದೇಶವನ್ನು ಸಾರುವುದಾಗಿದೆ’ ಎಂದರು.</p>.<p>ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ, ತೇಜೋಮಯಾನಂದ ಸ್ವಾಮೀಜಿ, ಒಂಟಿಕಂಬ ಮಠದ ತಿಪ್ಪೇರುದ್ರ ಸ್ವಾಮೀಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ‘ಶಿವರಾತ್ರಿ ಎಂದರೆ ಸದಾ ಎಚ್ಚರದಿಂದಿದ್ದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ, ನಮ್ಮಲ್ಲಿರುವ ಅರಿವನ್ನು ಜಾಗೃತ ಮತ್ತು ಆತ್ಮನಿವೇದನೆ ಮಾಡಿಕೊಳ್ಳುವ ರಾತ್ರಿಯಾಗಿದೆ’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.</p>.<p>ನಗರದ ಮುರುಘಾ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ನಡೆದ ಶಿವರಾತ್ರಿ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ದೇಹವೆಂಬ ತುಂಬಿದ ಬಂಡಿಯನ್ನು ನಡೆಸುವುದು ಪಂಚೇಂದ್ರಿಯಗಳು. ಅವುಗಳನ್ನು ನಮ್ಮ ಹಿಡಿತದಲ್ಲಿಟ್ಟಕೊಳ್ಳಬೇಕು. ಇದನ್ನೇ ನಮ್ಮ ಶರಣರು ಅವಧಾನ ಭಕ್ತಿ ಎಂದಿದ್ದಾರೆ. ಆಧ್ಯಾತ್ಮ ದೃಷ್ಟಿಯಲ್ಲಿ ಆಸೆ ಪಡುವುದು ತಪ್ಪಲ್ಲ, ಆದರೆ ಸಿಕ್ಕಿರುವುದರಲ್ಲೇ ತೃಪ್ತಿ ಪಡುವಂತೆ ಇರಬೇಕು’ ಎಂದು ಸಲಹೆ ನೀಡಿದರು.</p>.<p>‘ಮಾತನಾಡುವ ದೇವರು ನಡೆದಾಡುವ ದೇವಾಲಯ ಯಾರು ಅಂದರೆ ಅದುವೇ ಮಾನವ. ಆದ್ದರಿಂದಲೇ ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನನ್ನು ಮಹಾದೇವನನ್ನಾಗಿ ಮಾಡಿದವರು ನಮ್ಮ ಶರಣರು’ ಎಂದು ತಿಳಿಸಿದರು.</p>.<p>‘ಪ್ರಸ್ತುತ ದಿನಗಳಲ್ಲಿ ಶಿವತತ್ವದ ಅನಿವಾರ್ಯತೆ ಇದೆ. ಸಮಾಜದಲ್ಲಿ ಬದುಕುವ ಮನುಷ್ಯನಿಗೆ ಶಾಂತಿ ಮತ್ತು ಧ್ಯಾನದ ಅವಶ್ಯಕತೆಯಿದೆ. ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಆಚರಣೆಗೂ ಧಾರ್ಮಿಕ ಹಿನ್ನಲೆ ಜೊತೆಗೆ ವೈಚಾರಿಕ ಸ್ಪರ್ಶವಿದೆ’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಹೇಳಿದರು.</p>.<p>‘ಉಪವಾಸ, ಜಾಗರಣೆ, ಅಭಿಷೇಕ ಮತ್ತು ಬಿಲ್ವಾರ್ಚನೆ ಇವು ಶಿವನನ್ನು ಪೂಜಿಸುವ ನೆಪದಲ್ಲಿ ಮನುಷ್ಯನ ಅರೋಗ್ಯದ ಗುಟ್ಟನ್ನು ಒಳಗೊಂಡಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರುವ ಶಿವರಾತ್ರಿ ಸಮಾಜದಲ್ಲಿ ಸಮಾನತೆ ಸಂದೇಶವನ್ನು ಸಾರುವುದಾಗಿದೆ’ ಎಂದರು.</p>.<p>ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ, ತೇಜೋಮಯಾನಂದ ಸ್ವಾಮೀಜಿ, ಒಂಟಿಕಂಬ ಮಠದ ತಿಪ್ಪೇರುದ್ರ ಸ್ವಾಮೀಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>