ಅವಧೂತ ಬಿಂದು ಮಾಧವ ಶರ್ಮ ಸ್ವಾಮೀಜಿ ಅವರ ಶ್ರಮದ ಫಲವಾಗಿ ಕೋಟ್ಯಂತರ ವೆಚ್ಚದಲ್ಲಿ ಆಂಜನೇಯಸ್ವಾಮಿ ದೇಗುಲ ಜೀರ್ಣೋದ್ಧಾರ, ಮಾನಸ ಮಂದಿರ, ಅನ್ನಪೂರ್ಣೋಶ್ವರಿ ದಾಸೋಹ ಮಂದಿರ, ಭಾರತಿ ತೀರ್ಥ ಸಭಾ ಭವನ, ಮಹಾಲಕ್ಷ್ಮೀ ದೇಗುಲ, ನಾಡಿಗೆ ಮಾದರಿಯಾದ ಭಾರತ ರಥ ನಿರ್ಮಾಣ ಸೇರಿ ಹತ್ತು ಹಲವು ಭವ್ಯವಾದ ಕಟ್ಟಡಗಳು ನಿರ್ಮಾಣಗೊಂಡಿವೆ. ಗ್ರಾಮದೇವತೆ ಹೊನ್ನಾಂಬಿಕೆ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದೆ. ಗಣಪತಿ ತೋಟದಲ್ಲಿ ಭವ್ಯವಾದ ಆಂಜನೇಯ ರಥ ನಿರ್ಮಾಣ ಮಾಡಬೇಕು ಎಂಬ ಯೋಜನೆಯನ್ನು ರೂಪಿಸಿದ್ದರು.