ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಕೆ.ರವಿ, ‘ವೇಣು ಕಥೆಗಾರ ಆಗಿದ್ದು ವಿಸ್ಮಯ. ಅವರ ಕಥೆ, ಕಾದಂಬರಿ ವಿಭಿನ್ನ. ಸಾಕಷ್ಟು ಸಂಶೋಧನೆ ಮಾಡಿ ಕಾದಂಬರಿ ರಚಿಸಿದ್ದಾರೆ. ಅವರ ನಿರೂಪಣಾ ಶೈಲಿ ವಿಶಿಷ್ಟ. ಕಥೆ ಓದಿದರೆ ಸಿನಿಮಾ ನೋಡುವುದೇ ಬೇಡ. ಕಲ್ಲರಳಿ ಹೂವಾಗಿ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ದಕ್ಕಿರುವುದು ಅವರ ಕಥೆಯ ಕಾರಣಕ್ಕೆ’ ಎಂದು ಬಣ್ಣಿಸಿದರು.